Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಲಿವ್-ಇನ್ ಸಂಬಂಧದಲ್ಲಿದ್ದ ಮಗಳನ್ನು ಕೊಂದು ಕಾಡಿನಲ್ಲಿ ಬೆಂಕಿ ಹಚ್ಚಿದ ತಂದೆ..! ಪೊಲೀಸರ ಕಾರ್ಯಾಚರಣೆಯಲ್ಲಿ ಗೊತ್ತಾದದ್ದೇನು..?

554

ನ್ಯೂಸ್‌ ನಾಟೌಟ್‌: ಕಾಡೊಂದರಲ್ಲಿ ಮಹಿಳೆಯ ಅರೆಬೆಂದ ಶವ ಪತ್ತೆಯಾಗಿತ್ತು. ಇದೀಗ ಅದು ಮರ್ಯಾದಾ ಹತ್ಯೆ ಎಂಬುದು ತಿಳಿದುಬಂದಿದೆ. ಯುವತಿ ಲಿವ್ ಇನ್ ರಿಲೇಷನ್ ನಲ್ಲಿದ್ದಳು, ಅದು ತಿಳಿದ ಬಳಿಕ ಕೋಪಗೊಂಡ ತಂದೆ ತನ್ನ ಮಗನ ಜತೆ ಸೇರಿ ಮಗಳ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಘಟನೆ ಗುರುಗ್ರಾಮದ ಮುಜಾಫರ್ ​​ನಗರದಲ್ಲಿ ನಡೆದಿದೆ.

ಯುವತಿ ಗುರುಗ್ರಾಮದ ಇ-ಕಾಮರ್ಸ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ತನ್ನ ಗ್ರಾಮದ ಅಮಿತ್ ಎಂಬ ವ್ಯಕ್ತಿಯೊಂದಿಗೆ ಆಕೆ ಲಿವ್-ಇನ್ ಸಂಬಂಧದಲ್ಲಿದ್ದರು.

ಆಕೆ 2019 ರಲ್ಲಿ ಮದುವೆಯಾಗಿದ್ದರು ಆದರೆ ಎರಡು ವರ್ಷಗಳ ನಂತರ ಪತಿಯನ್ನು ತೊರೆದಿದ್ದರು. ಆಕೆಯ ಕುಟುಂಬ 2022 ರಲ್ಲಿ ಮತ್ತೊಂದು ಮದುವೆಗೆ ಪ್ರಯತ್ನಿಸಿತು, ಆದರೆ ಅದು ಫಲ ನೀಡಲಿಲ್ಲ. ಅದೇ ವರ್ಷ ಗುರುಗ್ರಾಮದಲ್ಲಿ ಅಮಿತ್ ಜತೆ ವಾಸಿಸಲು ಶುರು ಮಾಡಿದ್ದಳು. ವಿರೋಧದ ನಡುವೆಯೂ ಆಕೆ ತನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು.

ಮೇ 26 ರಂದು ಅಮಿತ್ ಜೊತೆ ಕೊನೆಯದಾಗಿ ಮಾತನಾಡಿದ್ದರು, ತನ್ನ ಕುಟುಂಬದವರ ಮನಸ್ಸು ಗೆಲ್ಲುವ ತನ್ನ ಕೊನೆಯ ಪ್ರಯತ್ನ ಎಂದು ಹೇಳಿದ್ದಳು. ಮೇ 29–30 ರ ರಾತ್ರಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಶವ ದೊರೆತ ಬಳಿಕ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಆಕೆಯ ತಂದೆ ರಾಜವೀರ್ ಸಿಂಗ್ (55) ಮತ್ತು ಸಹೋದರ ಸುಮಿತ್ ಸಿಂಗ್ (24) ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಶವವನ್ನು 5 ಕಿ.ಮೀ ದೂರದ ಕಾಡಿಗೆ ತೆಗೆದುಕೊಂಡು ಹೋಗಿ, ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎನ್ನಲಾಗಿದೆ.

ಕೇರಳ: 9 ಅಡಿ ಆಳದ ಒಂದೇ ಗುಂಡಿಯೊಳಗೆ ಸಿಲುಕಿದ್ದ ಹುಲಿ, ನಾಯಿಯ ರಕ್ಷಣೆ..! ನಾಯಿಯನ್ನು ಬೇಟೆಯಾಡದೆ ಒಟ್ಟಿಗೆ ಕುಳಿತಿದ್ದ ವ್ಯಾಘ್ರ..!

See also  ಅನ್ಯಧರ್ಮಿಯ ಯುವಕನ ಜತೆ ಧರ್ಮಸ್ಥಳದ ಯುವತಿಯ ಬಸ್‌ ಪ್ರಯಾಣ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget