ನ್ಯೂಸ್ ನಾಟೌಟ್ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಡಗಿಗೆ ಬಂದು ಹೋದ ಮೇಲೆ ಒಂದಲ್ಲ ಒಂದು ಗಲಾಟೆ ಗೊಂದಲಕ್ಕೆ ವೀರರ ನಾಡು ಸಾಕ್ಷಿಯಾಗುತ್ತಿದೆ.
ಇದೀಗ ಕೊಡಗಿನಲ್ಲಿ ಆಗಸ್ಟ್ ೨೪ರಂದು ಮಧ್ಯರಾತ್ರಿ ೧೨ ಗಂಟೆಯಿಂದ ದಿನಾಂಕ ಆಗಸ್ಟ್ ೨೬ರಂದು ಮಧ್ಯರಾತ್ರಿ ಹನ್ನೆರಡು ಗಂಟೆ ತನಕ ಎಲ್ಲ ರೀತಿಯ ಮದ್ಯದ ಅಂಗಡಿ, ಬಾರ್. ಹೋಟೆಲ್ ಮತ್ತು ಕ್ಲಬ್ ಗಳನ್ನು ಮುಚ್ಚುವಂತೆ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇತ್ತೀಚೆಗೆ ಸಿದ್ದರಾಮಯ್ಯ ಕೊಡಗಿಗೆ ಬಂದು ಮೊಟ್ಟೆ ಹೊಡೆಸಿಕೊಂಡಿದ್ದರು. ಸದ್ಯ ಪರಿಸ್ಥಿತಿ ವಿಕೋಪದಲ್ಲಿದೆ. ಈ ಕಾರಣಕ್ಕೆ ಕೊಡಗಿನಲ್ಲಿ ಮದ್ಯ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೊಡಗಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.