ಕರಾವಳಿ

ಕೊಕ್ಕಡ ಮೆಸ್ಕಾಂ ಶಾಖೆಯ ಶಿಬಾಜೆ  ಲೈನ್ ಮ್ಯಾನ್ ಗೆ ಜೀವಬೆದರಿಕೆ,ಪೊಲೀಸರಿಗೆ ನೀಡಿದ ದೂರಿನಲ್ಲೇನಿದೆ?

273

ನ್ಯೂಸ್ ನಾಟೌಟ್ :ಶಿಬಾಜೆ ಲೈನ್ ಮ್ಯಾನ್ ಉಮೇಶ ಎಂಬವರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.ಇವರು ಮೆಸ್ಕಾಂ ಕೊಕ್ಕಡ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಉಜಿರೆ ಉಪವಿಭಾಗದ ಕೊಕ್ಕಡ ಮೆಸ್ಕಾಂ ಶಾಖೆಯ ಶಿಬಾಜೆ ಗ್ರಾಮದ ಲೈನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುವ ಉಮೇಶ ಎಂಬವರಿಗೆ ಮಾಧವ ಗೌಡ ಎಂಬವರು ಬೆದರಿಕೆ ಒಡ್ಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಫೆ.26 ರಂದು 12 ಗಂಟೆಗೆ ಶಿಬಾಜೆ ಗ್ರಾಮದ ನಿರಾಣ ಎಂಬಲ್ಲಿ ಪೊಸೋಡಿ -ಬಂಗೇರಡ್ಕ ಎಂಬಲ್ಲಿಗೆ ಹೊಸದಾಗಿ ವಿದ್ಯುತ್ ಸಂಪರ್ಕದ ಕೆಲಸಕ್ಕೆ ನಾನು ಹೋಗಿದ್ದಾಗ ಮತ್ತು ಇಲಾಖೆಯಲ್ಲಿ ಟೆಂಡರ್ ಕೆಲಸ ಮಾಡಿಕೊಂಡಿರುವ ಪ್ರಕಾಶ್, ರಾಮಣ್ಣ ಎಂಬವರು ಕೆಲಸದ ನಿಮಿತ್ತ ಜತೆಯಲ್ಲಿದ್ದರು. ಈ ವೇಳೆ ಅಲ್ಲಿಗೆ ಜೀಪಿನಲ್ಲಿ ಬಂದ ಮಾಧವ ಗೌಡರು ಕರೆಂಟ್ ಕಂಬದ ಲೈನ್ ಗೆ ತಾಗುವ ಮರ ಕಡಿಯಿರಿ ಎಂದು ಹೇಳಿದರು. ವಿದ್ಯುತ್ ಸಂಪರ್ಕ ಮಾಡುವ ಸಂದರ್ಭ ಮರದ ಗೆಲ್ಲು ಕಡಿಯುವುದಾಗಿ ನಾನು ಹೇಳಿ ದಾಗ ಮಾಧವ ಗೌಡರು ನನಗೆ ಅವಾಚ್ಯ ವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಲ್ಲದೆ, ದೂಡಿ ಬೆದರಿಕೆ ಒಡ್ಡಿದ್ದಾರೆಂದು ಉಮೇಶರು ಬೆಳ್ತಂಗಡಿ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

See also  ತುಳುನಾಡ ಕಾರಣಿಕ ಕ್ಷೇತ್ರ ಪಣೋಲಿಬೈಲಿನಲ್ಲಿ 23 ಸಾವಿರ ಕೋಲ ಸೇವೆಗಳು ಬುಕ್ಕಿಂಗ್‌..! ಹರಕೆ ಪೂರ್ಣಗೊಳ್ಳಲು 35 ವರ್ಷಗಳು ಬೇಕಾ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget