ಕರಾವಳಿಸುಳ್ಯ

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಮಾಹಿತಿ ಕಾರ್ಯಗಾರ

ನ್ಯೂಸ್ ನಾಟೌಟ್ : ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಕಾನೂನು ಸಲಹಾ ಸಮಿತಿಯ ವತಿಯಿಂದ ಸುಳ್ಯದ ಶ್ರೀ ಶಾರದ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಗಾರವು ಇಂದು ನಡೆಯಿತು.

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ೪ನೇ ವರ್ಷದ ಕಾನೂನು ವಿದ್ಯಾರ್ಥಿನಿ ವೃಂದಾಪ್ರಕಾಶ್ ‘ಬಾಲಕಾರ್ಮಿಕ ನಿರ್ಮೂಲನಾ ಕಾಯ್ದೆ’ ಮತ್ತು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿನಿ ರೇವತಿ. ಪಿ. ಎಮ್ ರವರು ‘ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ’ ಎಂಬ ವಿಷಯಗಳ ಬಗ್ಗೆ ಕಾನೂನು ಮಾಹಿತಿ ನೀಡಿದರು. ಈ ವೇಳೆ ಕಾನೂನು ಉಪನ್ಯಾಸಕ ಜಯರಾಮ್. ವೈ. ಪ್ರಚಲಿತ ಕಾನೂನು ಕುರಿತು ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದು, ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.

Related posts

ಗ್ರಾಮ ಆಡಳಿತಾಧಿಕಾರಿಯಾಗುವ ಕನಸು ನಿಮಗಿದೆಯೇ..? ನಿಮ್ಮ ಜೊತೆಗಿದೆ IRCMD ಶಿಕ್ಷಣ ಸಂಸ್ಥೆ

ಮಗ್ಗಿ ಹೇಳದ್ದಕ್ಕೆ ಡ್ರಿಲ್ ಮಷಿನ್ ನಿಂದ ಗಾಯಗೊಳಿಸಿದ ಶಿಕ್ಷಕ

ಬೆಳ್ತಂಗಡಿಯ ಮೂವರು ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿಯಿಂದಲೇ ತನಿಖೆಗೆ ನೋಟಿಸ್! ಏನಿದು ಆಂತರಿಕ ಕಲಹ..? ಇಲ್ಲಿದೆ ಸಂಪೂರ್ಣ ಮಾಹಿತಿ