ಕ್ರೈಂರಾಜಕೀಯ

‘ನಿಮಗೆ ತಾಕತ್ತಿದ್ದರೆ ಬನ್ನಿ.. ಮರಳು ಲಾರಿ ಹತ್ತಿಸಿ ನೋಡುವ’ ಅಕ್ರಮ ಮರಳು ದಂಧೆಕೋರರಿಗೆ ಸವಾಲ್ ಹಾಕಿದ ಶಾಸಕಿ

224

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ದಂಧೆಕೋರರ ಸಂಖ್ಯೆ ಹೆಚ್ಚುತ್ತಿದೆ. ಹಾಗೆ ಅಕ್ರಮ ಮರಳು ದಂಧೆಕೋರರಿಗೆ ಈಗ ಶಾಸಕಿ ಸಿಂಹಸ್ವಪ್ನರಾಗಿದ್ದಾರೆ.
ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರ ಕಾರನ್ನು ಅಕ್ರಮ ಮರಳು ದಂಧೆಕೋರರು ಅಡ್ಡಗಟ್ಟಿ, ಬೆದರಿಕೆ ಹಾಕಿದ್ದಾರ ಎಂದು ತಿಳಿದು ಬಂದಿದೆ. ಸ್ವತಃ ಈ ಆರೋಪವನ್ನು ಶಾಸಕಿ ಮಾಡಿದ್ದಾರೆ. ಗುರುವಾರ ರಾತ್ರಿ ಖಾಸಗಿ ಕಾರ್ಯಕ್ರಮ ಮುಗಿಸಿ ವಾಸಪ್ ತೆರಳುತ್ತಿದ್ದಾಗ ನನ್ನ ಕಾರನ್ನು ಮರಳು ಮಾಫಿಯಾದವರು ಅಡ್ಡಗಟ್ಟಿದ್ದಾರೆ ಎಂದು ಶಾಸಕಿ ಆರೋಪಿಸಿದ್ದಾರೆ
.

ಅಷ್ಟಕ್ಕೂ ಸುಮ್ಮನಾಗದ ಶಾಸಕಿ, ರಾತ್ರಿ ಫೇಸ್​ಬುಕ್​ನಲ್ಲಿ ಲೈವ್ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ಲಾರಿ ಹತ್ತಿಸುವವರು ಬನ್ನಿ ನೋಡೋಣ. ತಾಕತ್ತಿದ್ದರೆ ಬನ್ನಿ ಇಲ್ಲಿ, ಏರಿಂಡಿಲಿ ನಾನು ಇದ್ದೀನಿ. ಯಾರು ಲಾರಿ ಹತ್ತಿಸುತ್ತೀರೋ ಬನ್ನಿ, ನಾನೊಬ್ಬ ಶಾಸಕಿಯಾಗಿ ಬಂದಿದ್ದೇನೆ. ನಾನು ಬೆಳಗಿನ ಜಾವದವರೆಗೂ ಇಲ್ಲೇ ಕಾಯುತ್ತೇನೆ, ಯಾರು ಬೇಕಾದರು ಬನ್ನಿ ಎಂದು ಮರಳು ಕಳ್ಳರಿಗೆ ಸವಾಲ್ ಹಾಕಿದ್ದಾರೆ.

ಮಾತ್ರವಲ್ಲ ಬೆಳಗಿನ ಜಾವದವರೆಗೂ ನಡು ರಸ್ತೆಯಲ್ಲೇ ಹೋರಾಟ ಮಾಡುತ್ತೇನೆ. ಘಟನಾ ಸ್ಥಳಕ್ಕೆ ಎಸ್.ಪಿ ಬರಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಜೊತೆಗೆ ಪೊಲೀಸರು ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

See also  ಶ್ರೀ ಮಹಿಷ ಮರ್ಧಿನಿಗೆ ವಜ್ರದ ಸರ ಅರ್ಪಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ, ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕರ ಕುಟುಂಬಸ್ಥರು, ಅಭಿಮಾನಿಗಳು ಭಾಗಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget