ಕರಾವಳಿಕೊಡಗು

ಮಡಿಕೇರಿ:ಅನಾಥ ಶವದ ಮುಂದೆ ಇತ್ತು ಲಕ್ಷಗಟ್ಟಲೆ ಹಣ,ಬೆರಗಾದ ಸ್ಥಳೀಯರು…

207

ನ್ಯೂಸ್ ನಾಟೌಟ್ : ಮಡಿಕೇರಿ ಸಮೀಪದ ಕುಶಾಲನಗರ ಮೂಲದ ತಮ್ಮಯ್ಯ(55) ಎಂಬುವರ ಮೃತದೇಹ ಶುಕ್ರವಾರ ಕಂಡು ಬಂದಿದ್ದು,ಬೆಳ್ತಂಗಡಿಯ ದೂರವಾಣಿ ವಿನಿಮಯ ಕೇಂದ್ರದ ಸಮೀಪ ಪತ್ತೆಯಾಗಿದೆ.ಪೊಲೀಸ್ ಸಮ್ಮುಖದಲ್ಲಿ ಮೃತವ್ಯಕ್ತಿಯ ಕುಟುಂಬಸ್ಥರ ಪತ್ತೆಗಾಗಿ ಮೃತದೇಹದ ಬಳಿ ಇದ್ದ ಬ್ಯಾಗ್ ಹುಡುಕಿದಾಗ ಲಕ್ಷಗಟ್ಟಲೇ ಹಣ ಪತ್ತೆಯಾಗಿದೆ. ಸುಮಾರು 6.65 ಲಕ್ಷ ರೂ. ಹಣವಿತ್ತು ಎಂದು ಹೇಳಲಾಗಿದೆ.

ಉಜಿರೆಯಲ್ಲಿ ಬಹಳ ಕಾಲದಿಂದ ಇವರು ವಾಸವಿದ್ದರು ಎಂದು ಹೇಳಲಾಗಿದೆ. ರಾತ್ರಿ ಬಸ್ ತಂಗುದಾಣ, ಅಂಗಡಿ ಮುಂಭಾಗ, ಬಿಎಸ್ಸೆನ್ನೆಲ್ ಕಚೇರಿ ಪಕ್ಕ ಮಲಗುತ್ತಿದ್ದರು ಎಂದು ತಿಳಿದು ಬಂದಿದೆ.ಇವರು ಕೂಲಿ ಕೆಲಸ ಮಾಡುತ್ತಿದ್ದು, ಅದರಿಂದ ಸಂಗ್ರಹಿಸಿದ ಹಣವಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತರ ವಾರಸುದಾರರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಮೃತದೇಹವನ್ನು ಉಜಿರೆ ಬೆಳಾಲು ಘಟಕದ ಸ್ವಯಂಸೇವಕರಾದ ರವೀಂದ್ರ, ಸುಧೀರ್ ಹಾಗೂ ರಾಘವೇಂದ್ರ ಅವರು ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಿದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್ ಉಪಸ್ಥಿತರಿದ್ದು ತಂಡದ ಸದಸ್ಯರಿಗೆ ನಿರ್ದೇಶನ ನೀಡಿದ್ದರು. ಮೃತರ ವಾರಸುದಾರರಿದ್ದಲ್ಲಿ ಬೆಳ್ತಂಗಡಿ ಆರಕ್ಷಕ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

See also  ಚಿಕ್ಕಮಗಳೂರು-ಉಡುಪಿ ಜಿಲ್ಲೆಯಗಳಲ್ಲಿ ನಕ್ಸಲರ ಓಡಾಟ..! ಗ್ರಾಮಸ್ಥರೊಂದಿಗೆ ಸಭೆ ನಡೆಸಿರುವ ಶಂಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget