ಶಿಕ್ಷಣಸುಳ್ಯ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಇಮ್ಯೂನೈಸೇಶನ್ ವೀಕ್ ಸಂಭ್ರಮ, ‘ಲಸಿಕೆ – ಇಮ್ಯೂನೈಸೇಶನ್’ ಬಗ್ಗೆ ಅರಿವಿನ ಕಾರ್ಯಕ್ರಮ, ಡಾ| ಕೆವಿ ಚಿದಾನಂದ ಸೇರಿದಂತೆ ಗಣ್ಯರು ಭಾಗಿ

154

ನ್ಯೂಸ್ ನಾಟೌಟ್: ವಿಶ್ವದಾದ್ಯಂತ ರೋಗ ನಿರೋಧಕ ವಾರವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಆಚರಿಸಲಾಗುತ್ತಿದೆ. ವ್ಯಾಕ್ಸಿನ್ ಮತ್ತು ಇಮ್ಯೂನೈಸೇಷನ್ ಮೌಲ್ಯದ ಅರಿವು ಮೂಡಿಸುವುದಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತೆಯೇ ಸುಳ್ಯದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿರುವ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಮತ್ತು ಇಮ್ಯೂನೈಸೇಷನ್ ಮೌಲ್ಯದ ಅರಿವಿನ ಕಾರ್ಯಕ್ರಮ ಬುಧವಾರ (ಏ.24) ನಡೆಯಿತು. ಇಲ್ಲಿನ ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ | ಕೆ.ವಿ ಚಿದಾನಂದ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ವಾಕ್ಸಿನೇಷನ್ ಪ್ರಾಮುಖ್ಯತೆಯನ್ನು ವಿವರಿಸಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ | ನೀಲಾಂಬಿಕೈ ನಟರಾಜನ್, ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ದಿನೇಶ್ ಪಿ.ವಿ ಉಪಸ್ಥಿತರಿದ್ದರು. ‘ಇಮ್ಯೂನೈಸೇಷನ್ ಮೂಲಕ ಮಾನವ ಜೀವ ಜೀವ ಉಳಿಸಲು ಸಾಧ್ಯ’ ಅನ್ನುವ ವಿಷಯದ ಬಗ್ಗೆ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕ ಡಾ| ಅಪೂರ್ವ ದೊರೆ ವಿವರಿಸಿದರು. ಕಮ್ಯೂನಿಟಿ ಮೆಡಿಸಿನ್ ವಿಭಾಗದ ಗೌರವಾನ್ವಿತ ಪ್ರಾಧ್ಯಾಪಕರ ಡಾ| ನಾರಾಯಣ್ ಹೊಳ್ಳ ಅವರು ‘ಇಮ್ಯೂನೈಸೇಷನ್ ಇನ್ ಹಾಸ್ಪಿಟಲ್ ಸೆಟ್ಟಿಂಗ್’ ಎಂಬ ವಿಚಾರದ ಕುರಿತು ಮಾತನಾಡಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

See also  ಸುಳ್ಯ:ಚರಂಡಿಗೆ ಪಲ್ಟಿಯಾದ ಕಾರು,ಇಬ್ಬರು ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget