ನ್ಯೂಸ್ ನಾಟೌಟ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದು(ಏಪ್ರಿಲ್ 05) ಪದವಿ ಪ್ರಧಾನ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಜೈಪುರ ಇಲ್ಲಿನ ಅಧ್ಯಕ್ಷರು ಮತ್ತು ಕುಲಪತಿಗಳಾದ ಡಾ ಅಚಲ್ ಗುಲಾಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು. ಈ ವೇಳೆ ಮಾತನಾಡಿದ ಅವರು, “ಯುವ ವೈದ್ಯರು ಸಮಾಜಕ್ಕೆ ಕನ್ನಡಿಯಿದ್ದಂತೆ, ಭಾರತದ ಅತ್ಯುತ್ತಮ ವೈದ್ಯರಾಗಿ ಬೆಳೆಯಿರಿ. ಸಾಧನೆಯ ಉತ್ತುಂಗದಲ್ಲಿ ಬೆಳೆದು ಬಂದ ದಾರಿಯನ್ನು ಸಂಸ್ಥೆಯನ್ನು ಪ್ರಾಧ್ಯಾಪಕರನ್ನು ಹಾಗೂ ತಂದೆ ತಾಯಿಯನ್ನು ಮರೆಯದಿರಿ” ಎಂದರು. “ಯಾವಾಗಲು ಜ್ಞಾನ ಸಂಪಾದಿಸುವ ಹಸಿವನ್ನು ಹೊಂದಿರಿ, ಕೊನೆಯವರೆಗೂ ಸಮಾಜದ ನೋವು ನಲಿವುಗಳಿಗೆ ತಕ್ಷಣ ಸ್ಪಂದಿಸಬೇಕಾಗುತ್ತದೆ. ನಿಮ್ಮಿಂದ ಜನರಿಗೆ ಉತ್ತಮ ಚಿಕಿತ್ಸೆ ದೊರೆಯುವಂತಾಗಲಿ” ಎಂದು ಹಾರೈಸಿ ಪದವಿ ಸ್ವೀಕರಿಸಿದ ಭವಿಷ್ಯ ದ ವೈದ್ಯರುಗಳಿಗೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ | ಕೆ.ವಿ ಚಿದಾನಂದ, “ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದು ನಮಗೆಲ್ಲ ಖುಷಿಯ ವಿಚಾರ. ಇಂತಹ ಗ್ರಾಮೀಣ ಪ್ರದೇಶದಲ್ಲಿ ನಮ್ಮ ತಂದೆಯವರು ಸಂಸ್ಥೆ ಕಟ್ಟಿ ಬೆಳೆಸಿದರು. ಇಂದು ಅವರ ಕನಸು ನನಸಾಗಿದೆ. ಹಲವು ವರ್ಷಗಳ ಕಠಿಣ ಪರಿಶ್ರಮ, ತ್ಯಾಗ ಮತ್ತು ಸಮರ್ಪಣೆ ಈ ಕ್ಷಣಕ್ಕೆ ಕಾರಣವಾಗಿದೆ ಎಂದು ಸ್ಮರಿಸಿದರು.
ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಒ.ಬಿ.ಜಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ಗೀತಾ ದೊಪ್ಪ ಪ್ರಮಾಣ ವಿಧಿ ಭೋದಿಸಿದರು. ಈ ಸಂದರ್ಭ ಕವನ ಅಡೂರ್ ಹಾಗೂ ಚೈತ್ರ ಅಡೂರ್ ಅವರಿಂದ ಯಕ್ಷಗಾನ ವೈವಿದ್ಯ ನಡೆಯಿತು.
ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಉಪಾಧ್ಯಕ್ಷರಾದ ಶೋಭಾ ಚಿದಾನಂದ, ಕಾರ್ಯದರ್ಶಿ ಡಾ ಐಶ್ವರ್ಯ ಕೆ. ಸಿ ಕೌನ್ಸಿಲ್ ಮೆಂಬರ್ಸ್ ಹೇಮಾನಾಥ್ ಕೆ. ವಿ ಜಗದೀಶ್ ಎ.ಹೆಚ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಸಿ ರಾಮಚಂದ್ರ ಭಟ್, ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲರು ಪ್ರೊ. ಡಾ ಲೀಲಾಧರ್ ಡಿ.ವಿ, ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥರು ಪ್ರೊ. ಡಾ ರಂಗನಾಥ್ ಎಮ್ ಸಿ, ಸರ್ಜರಿ ವಿಭಾಗ ಮುಖ್ಯಸ್ಥರು ಡಾ ಗೋಪಿನಾಥ್ ಪೈ, ಟ್ರಾಮ ಹಾಗೂ ಎಮರ್ಜೆನ್ಸಿ ವಿಭಾಗದ ಡೈರೆಕ್ಟರ್ ಡಾ ಸುಬ್ರಮಣ್ಯ ಎಮ್ ಪಿ, ಗೌರವ ಉಪನ್ಯಾಸಕರಾದ ಶೀಲಾ ಜಿ ನಾಯಕ್, ಪೆತಾಲಜಿ ವಿಭಾಗ ಮುಖ್ಯಸ್ಥರು ಸತ್ಯವತಿ ಆರ್ ಆಲ್ವ, ಇ.ಎನ್.ಟಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ರವಿಶಂಕರ್,ಅನಾಟಮಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ವಿ ಎಸ್ ಪಾರೆ, ಬಯೋಕೆಮಿಸ್ಟ್ರಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ಶಿವರಾಜ್ ಶಂಕರ್ ಭಟ್, ಡಾ ಭರತ್ ಶೆಟ್ಟಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಡಾ ಸಿ ರಾಮಚಂದ್ರ ಭಟ್ ಅಥಿತಿಗಳ ಪರಿಚಯ ಮಾಡಿದರು. ಡಾ ನಿಕ್ಷೇಪ್ ಡಾ ಶ್ರಿವತ್ಸ ಪ್ರಾರ್ಥಿಸಿದರು. ಸಂಜನಾ ವಿ ಶೆಟ್ಟಿ ಹಾಗೂ ನಿಕ್ಷೇಪ್ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಮೈಕ್ರೋಬಯಾಲಜಿ ವಿಭಾಗದ ಪ್ರೊ. ಡಾ ನಮ್ರತಾ ಕೆ ಜಿ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾದ್ಯಾಪಕರು ಪೋಷಕರು, ಬೋಧಕ -ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.