ನ್ಯೂಸ್ ನಾಟೌಟ್: ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಮಾನವ ಹಕ್ಕು ಹಾಗೂ ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ ಮೇ 08 ಗುರುವಾರ ದಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ ಉದಯಕೃಷ್ಣ ಬಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಚನಾ ಶರೀರ ವಿಭಾಗದ ಪ್ರೊಫೆಸರ್ ಡಾ ವಿನಯ ಶಂಕರ ಭಾರದ್ವಾಜ್ ಬಿ ಭಾಗವಹಿಸಿದ್ದರು.
ಪ್ರಥಮ ಚಿಕಿತ್ಸೆಯ ಉಪಯೋಗ ಹಾಗೂ ತುರ್ತು ಸಂದರ್ಭದಲ್ಲಿ ಪಾಲಿಸಬೇಕಾದ ಪ್ರಥಮ ಚಿಕಿತ್ಸಾ ಕ್ರಮ ಹಾಗೂ ವಿವಿಧ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಹೃದಯಾಘಾತದಂತಹ ಸಂಧರ್ಭಗಳಲ್ಲಿ ಸಿ. ಪಿ ಆರ್ (C.P. R)ಮಾಡುವ ವಿಧಾನಗಳನ್ನು ವಿಸ್ತ್ರತವಾಗಿ ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ. ವಿ ದಾಮೋದರ ಗೌಡ, ಮಾನವ ಹಕ್ಕು ಘಟಕದ ನಿರ್ದೇಶಕರು ಹಾಗೂ ಉಪನ್ಯಾಸಕರಾದ ಅರ್ಚನಾ ಆರ್ ರೈ, ಐ.ಕ್ಯೂ.ಎ.ಸಿ ನಿರ್ದೇಶಕರು ಹಾಗೂ ಉಪನ್ಯಾಸಕರಾದ ರಚನಾ ಕೆ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಸಾಂದ್ರ ಸ್ವಾಗತಿಸಿದರು, ನಂದನ ಧನ್ಯವಾದಗೈದರು, ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಳ್ಯ: ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ..! ಮದುವೆಗೆ ಕೆಲವೇ ದಿನಗಳಿರುವಾಗ ಘಟನೆ..!