ಕರಾವಳಿ

ಕೆವಿಜಿ ವಿದ್ಯಾ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿ, ಡಾ| ರೇಣುಕಾ ಪ್ರಸಾದ್ ಉಸ್ತುವಾರಿಯ ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗಳಿಂದ ಪ್ರತಿಭಟನೆ

ನ್ಯೂಸ್ ನಾಟೌಟ್: ಕೆವಿಜಿ ವಿದ್ಯಾ ಸಂಸ್ಥೆಗಳಿಗೆ ಕೂಡಲೇ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿ ಡಾ| ರೇಣುಕಾ ಪ್ರಸಾದ್ ಕೆ.ವಿ ಅವರ ಉಸ್ತುವಾರಿಯಲ್ಲಿರುವ ಕೆವಿಜಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ, ಸಿಬ್ಬಂದಿ ವರ್ಗದವರು ಪ್ರತಿಭಟನೆ ಮೆರವಣಿಗೆಯನ್ನು ಕೆವಿಜಿ ಜಂಕ್ಷನ್ ನಲ್ಲಿ ನಡೆಸಿದರು.ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೆವಿಜಿ ಡೆಂಟಲ್ ಕಾಲೇಜು ಬಳಿಯಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ತಾಲೂಕು ಕಚೇರಿ ಬಳಿ ಸಮಾವೇಶ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕೆವಿಜಿ ಡೆಂಟಲ್ ಕಾಲೇಜು, ಕೆವಿಜಿ ಇಂಜಿನೀಯರಿಂಗ್ ಕಾಲೇಜು, ಕೆವಿಜಿ ಪಾಲಿಟೆಕ್ನಿಕ್, ಕೆವಿಜಿ ಐಟಿಐ ಸಿಬ್ಬಂದಿ, ವಿದ್ಯಾರ್ಥಿ ಬಳಗ ಪಾಲ್ಗೊಂಡಿದ್ದರು.

Related posts

ಪುತ್ತೂರು: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು, ಕೈ ಕಾಲು ಪೀಸ್..ಪೀಸ್ ಆದ ರೀತಿಯಲ್ಲಿ ಕಂಡು ಬಂದ ಮೃತದೇಹ

ಸುಳ್ಯ:ವಿಷ ಸೇವಿಸಿ ಕಾಂಗ್ರೆಸ್ ನಾಯಕ ಆತ್ಮಹತ್ಯೆ

ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟ ಭ್ರಷ್ಟ ತಹಶೀಲ್ದಾರ್‌ ಅಜಿತ್‌ ಕುಮಾರ್‌ಗೆ ವರ್ಗಾವಣೆ ಶಿಕ್ಷೆ ಮಾತ್ರ..?