ಕರಾವಳಿಕ್ರೈಂ

ಕುಂಬ್ರ: ಶೇಖಮಲೆ ತಿರುವಿನಲ್ಲಿ ಭೀಕರ ಅಪಘಾತ, ಬೈಕ್ ಸವಾರರಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್:  ದ್ವಿಚಕ್ರ ವಾಹನವೊಂದು ಪುತ್ತೂರಿನ ಕುಂಬ್ರ  ಸಮೀಪದ ಶೇಖಮಲೆ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ಜನವರಿ 27ರಂದು ಶನಿವಾರ ರಾತ್ರಿ ಘಟನೆ ನಡೆದಿದೆ. ಘಟನೆಯಲ್ಲಿ  ಇಬ್ಬರು ಬೈಕ್ ಸವಾರರಿಗೆ ಗಂಭೀರವಾಗಿ ಗಾಯವಾಗಿದೆ. ಬೈಕ್ ಕೂಡ ಜಖಂಗೊಂಡಿದೆ. ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಗದಿಂದ ಬಂದ ಬೈಕ್ ನಿಯಂತ್ರಣ ತಪ್ಪಿ ಸೇತುವೆಗೆ ಗುದ್ದಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಅಮೆರಿಕದ ಶ್ವೇತಭವನದ ಮೇಲೆ ಬೃಹತ್ ಟ್ರಕ್ ಮೂಲಕ ದಾಳಿಗೆ ಯತ್ನಿಸಿದ್ದ ಭಾರತ ಮೂಲದ ಯುವಕ..! 8 ವರ್ಷ ಜೈಲು..!

ಮಂಗಳೂರು:ಮಾಜಿ ಶಾಸಕ ಮೋಯ್ದಿನ್ ಬಾವಾರನ್ನು ಕಾಡಿದ ಬೀದಿ ನಾಯಿ ಕಾಟ: 25 ದಿನಗಳಿಂದ ವ್ಹೀಲ್ ಚೇರ್‌ನಲ್ಲೇ ಓಡಾಟ;ಆಗಿದ್ದೇನು?

2 ವರ್ಷದ ಮಗುವಿನ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ! ಪೊಲೀಸರ ತನಿಖೆಯಿಂದ ಬಯಲಾಯ್ತು ಅಸಲಿ ಕಾರಣ!