Latestಕ್ರೈಂರಾಜ್ಯ

KSRTC ಬಸ್​ ನಿಲ್ಲಿಸಿ ನಮಾಜ್ ಮಾಡಿದ್ದ ಚಾಲಕ ಅಮಾನತ್ತು, ವಿವರಣೆ ನೀಡುವಂತೆ ನೋಟಿಸ್..!

1.1k

ನ್ಯೂಸ್ ನಾಟೌಟ್: ಕರ್ತವ್ಯದ ವೇಳೆಯಲ್ಲೇ ಮಾರ್ಗಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದ ksrtc ಬಸ್ ಚಾಲಕ ಎ.ಆರ್.ಮುಲ್ಲಾ ಎಂಬಾತನನ್ನು ಸಾರಿಗೆ ಇಲಾಖೆ ಅಮಾನತ್ತು ಮಾಡಿದೆ.

ಹಾನಗಲ್ ಘಟಕದ ಚಾಲಕ ಎ.ಆರ್.ಮುಲ್ಲಾ ಕರ್ತವ್ಯದ ವೇಳೆ ರಸ್ತೆ ಪಕ್ಕ ಜನರಿದ್ದ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಇದೀಗ ಕರ್ತವ್ಯಲೋಪ ಆರೋಪದಲ್ಲಿ ಚಾಲಕ ಎ.ಆರ್.ಮುಲ್ಲಾನನ್ನು ಅಮಾನತ್ತುಗೊಳಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿ ಇಂದು (ಮೇ 01)ಆದೇಶ ಹೊರಡಿಸಿದ್ದಾರೆ.

ವಿಚಾರಣೆ ಮುಗಿಯುವವರೆಗೂ ಅಮಾನತ್ತು ಮಾಡಿ ಆದೇಶಿಸಿದ್ದು, ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದೆ.

ಕರ್ತವ್ಯದಲ್ಲಿರುವಾಗ ಮಾರ್ಗ ಮಧ್ಯ ಜನರಿದ್ದ KSRTC ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ..! ವಿಡಿಯೋ ವೈರಲ್

See also  5 ವರ್ಷದ ಬಾಲಕಿ ಮೇಲೆ ತಂದೆ ಮತ್ತು ಚಿಕ್ಕಪ್ಪನಿಂದಲೇ ಅತ್ಯಾಚಾರ..! 84 ವರ್ಷ ಜೈಲು, 3 ಲಕ್ಷ ದಂಡ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget