ರಾಜ್ಯವೈರಲ್ ನ್ಯೂಸ್ಶಿಕ್ಷಣ

ಪ್ರಯಾಣಿಕ ಇಳಿದು 209 ಕಿ.ಮೀ ತಲುಪಿದ ಬಳಿಕ KSRTC ಬಸ್ ನಲ್ಲಿ ಸಿಗ್ತು ₹2.5 ಲಕ್ಷ ರೂ..! ಪ್ರಾಮಾಣಿಕತೆ ಮೆರೆದ KSRTC ಬಸ್ ಕಂಡಕ್ಟರ್, ಚಾಲಕರಿಗೆ ಮೆಚ್ಚುಗೆ

155

ನ್ಯೂಸ್ ನಾಟೌಟ್: ಬಸ್​ನಲ್ಲಿ ಬಿಟ್ಟು ಹೋಗಿದ್ದ 2.5 ಲಕ್ಷ ರೂಪಾಯಿ ಹಣವನ್ನು KSRTC ಬಸ್ ಕಂಡಕ್ಟರ್ ಪ್ರಯಾಣಿಕನಿಗೆ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಗ್ರಾಮೀಣ ಘಟಕ 1ರಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕ ಹನುಮಂತರಾಯ ಹಾಗೂ ನಿರ್ವಾಹಕ ಮಂಜುನಾಥ ಬಸ್​ನಲ್ಲಿ ​ದೊರೆತ ಹಣವನ್ನು ಪ್ರಯಾಣಿಕವಾಗಿ ಸೋಮಶೇಖರ್ ಪಾಟೀಲ್‌ ಎಂಬವರಿಗೆ ಮರಳಿಸಿದ್ದಾರೆ. ಹುಬ್ಬಳ್ಳಿಯಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಬಸ್​ನಲ್ಲಿ ಸೋಮಶೇಖರ್ ಪಾಟೀಲ್ ಮಾನ್ವಿ ಪಟ್ಟಣದಿಂದ ರಾಯಚೂರಿಗೆ ಬರುತ್ತಿದ್ದರು.

ಆದರೆ ರಾಯಚೂರಿನಲ್ಲಿ ಇಳಿಯುವಾಗ ಹಣದ ಚೀಲವನ್ನು ಬಸ್‌ನಲ್ಲಿಯೇ ಬಿಟ್ಟು ಹೋಗಿದ್ದರು. ಬಸ್​ ಹೈದರಾಬಾದ್​ ತಲುಪಿದ ನಂತರ ಚೀಲವನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕರು ಅದನ್ನು ಪರಿಶೀಲಿಸಿದ್ದು, 2.5 ಲಕ್ಷ ನಗದು ಜೊತೆಯಲ್ಲಿ ಪ್ರಯಾಣಿಕನ ಬ್ಯಾಂಕ್​ ಪಾಸ್​ಬುಕ್​ ಹಾಗೂ ಮೊಬೈಲ್ ನಂಬರ್​ ಸಿಕ್ಕಿದೆ. ನಂತರ ಅವರು, ಸೋಮಶೇಖರ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಹೈದರಾಬಾದ್‌ನಿಂದ ಇಂದು(ಜೂ.19) ಮರಳಿ ಹುಬ್ಬಳ್ಳಿ ಕಡೆ ತೆರಳುವಾಗ ಪ್ರಯಾಣಿಕನಿಗೆ ಹಣವನ್ನು ಮರಳಿಸಿ ಪ್ರಮಾಣಿಕತೆ ಮೆರೆದಿದ್ದಾರೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/06/darshan-and-gang-internal-matter-revealed-to-police
https://newsnotout.com/2024/06/vijayalakshmi-wife-of-darshan-kannada-news-legal-fight-kannada-news
https://newsnotout.com/2024/06/darshan-thoogudeepa-and-vijayalakshimi-kannada-news-renuka-swami-issue
https://newsnotout.com/2024/06/uppinangady-hemavathi-case-sslc-student-accused-and-arrested
See also  ರೆಡ್ ಸಿಗ್ನಲ್ ನಲ್ಲಿ ಸಿಲುಕಿದ್ದ ಆಂಬ್ಯುಲೆನ್ಸ್‌ ಗೆ ಟ್ರಾಫಿಕ್ ಕ್ಲಿಯರ್ ಮಾಡಿ ಹೀರೋ ಆದ ಯ್ಯೂಟ್ಯೂಬರ್..! ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget