ಕ್ರೈಂವೈರಲ್ ನ್ಯೂಸ್

ಕೆಎಸ್ಆರ್‌ಟಿಸಿ ಬಸ್ಸನ್ನೇ ಕದ್ದು ಎಸ್ಕೇಪ್ ಆದ ಖದೀಮರು!

312

ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಕಳ್ಳರು ಬೆಲೆಬಾಳುವ ಚಿನ್ನ, ಹಣ, ಮೊಬೈಲ್, ಬೈಕ್- ಕಾರು ಮುಂತಾದವುಗಳನ್ನು ಕಳ್ಳತನ ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಖದೀಮರ ತಂಡ ಕೆಎಸ್ಆರ್‌ಟಿಸಿ ಬಸ್ಸನ್ನೇ ಎಗರಿಸಿದ್ದಾರೆ. ಇಂಥದೊಂದು ಘಟನೆಗೆ ಸಾಕ್ಷಿಯಾಗಿರುವುದು ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್‌ ನಿಲ್ದಾಣ.

ಇಲ್ಲಿನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೀದರ್‌ನ ನಂಬರ್‌-2 ಡಿಪೋಗೆ ಸೇರಿದ ಕೆಎ 38 ಎಫ್‌ 971 ನೋಂದಣಿಯ ಬಸ್ಸನ್ನು ಖದೀಮರು ಕಳ್ಳತನ ಮಾಡಿದ್ದಾರೆ.

ಮಂಗಳವಾರ ಮುಂಜಾನೆ ಸುಮಾರು 3.30 ಸುಮಾರಿಗೆ ಕಳ್ಳರು ಕೃತ್ಯವೆಸಗಿದ್ದು, ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು ಬಸ್ಸನ್ನು ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಿಂಚೋಳಿ ಪೊಲೀಸರು ಸಾರಿಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕಳವಾದ ಬಸ್ ಹುಡುಕಾಟಕ್ಕಾಗಿ ಪೊಲೀಸರ ಎರಡು ತಂಡ ತೆಲಂಗಾಣಕ್ಕೆ ತೆರಳಿದೆ. ಘಟನೆ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಪುಟ್ಟ ಬಾಲಕನನ್ನು ಥಳಿಸಿ ಲಿಫ್ಟಿನಿಂದ ಹೊರಕ್ಕೆ ದೂಡಿದ ಮಹಿಳೆ..! ವಿಡಿಯೋ ವೈರಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget