ಕರಾವಳಿ

ಬೆಳ್ತಂಗಡಿ: ಚಲಿಸುತ್ತಿದ್ದ KSRTC ಬಸ್ ನ ಟಯರ್ ಬ್ಲಾಸ್ಟ್..! ಸೀಟಿನಲ್ಲಿ ಕುಳಿತವನ ಕಾಲು ‘ಲಟಕ್’ ಮುರಿದಿದ್ದೇಗೆ..?

146

ನ್ಯೂಸ್ ನಾಟೌಟ್: ಚಲಿಸುತ್ತಿದ್ದ KSRTC ಬಸ್ ನ ಟಯರ್ ಬ್ಲಾಸ್ಟ್ ಆಗಿ ಪ್ರಯಾಣಿಕನೊಬ್ಬನ ಕಾಲು ಲಟಕ್ಕೆಂದು ಮುರಿದಿರುವ ಘಟನೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಮಳವಳ್ಳಿ ತಾಲೂಕು ಮಂಡ್ಯ ನಿವಾಸಿ ಸಿದ್ದರಾಜು(37) ಅವರ ಕಾಲಿನ ಮೂಳೆ ಮುರಿತಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದಿದ್ದೇಗೆ..?
ದಿನಾಂಕ 08-12-2023ರಂದು ಶುಕ್ರವಾರ ಮಧ್ಯಾಹ್ನ ಸಮಯ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ತಲುಪಿದಾಗ ಬಸ್ ಚಾಲಕ ಅಜಾಗರೂಕತೆಯಿಂದ ಬಸ್ ಅನ್ನು ಚಲಾಯಿಸಿದ್ದಾರೆ. ಈ ವೇಳೆ ಬಸ್ ನ ಟಯರ್ ಬ್ಲಾಸ್ಟ್ ಗೊಂಡಿದ್ದು ಟಯರ್ ಮೇಲಿದ್ದ ಮಡ್ ಗಾರ್ಡ್ ಕಿತ್ತುಕೊಂಡು ಬಂದಿದೆ. ಅದರ ಮೇಲಿನ ಸೀಟಿನಲ್ಲಿ ಕುಳಿತುಕೊಂಡಿದ್ದ ಸಿದ್ದರಾಜು ಅವರ ಕಾಲಿಗೆ ಗಾರ್ಡ್ ಬಡಿದು ಕಾಲಿನ ಮೂಳೆ ಮುರಿದು ಹೋಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 115/2023 ಕಲಂ: 279,338,ಭಾ.ದಂ.ಸಂ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

See also  ಪುರಾತನ ಕಾಲದ ನಿಗೂಢ ಗುಹೆ ಪತ್ತೆ, ಹತ್ತು ಹಲವು ಪ್ರಶ್ನೆಗೆ ಸಿಗಬೇಕಿದೆ ಉತ್ತರ
  Ad Widget   Ad Widget   Ad Widget   Ad Widget   Ad Widget   Ad Widget   Ad Widget