Latestಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್

ದೇಶಕ್ಕೆ ಊಹಿಸಲಾಗದ ಗಂಡಾಂತರ ಎದುರಾಗಲಿದೆ ಎಂದ ಕೋಡಿಮಠದ ಶ್ರೀ..! ಜೊತೆಗೆ ಸಂಕ್ರಾಂತಿ ಒಳಗೆ ಮೇಘ ಸ್ಫೋಟದ ಅನಾಹುತದ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ..!

592

ನ್ಯೂಸ್ ನಾಟೌಟ್ :ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವವಾಗುವ ಲಕ್ಷಣಗಳಿವೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದಾರೆ.

“ನಿರೀಕ್ಷೆಗೂ ಮೀರಿದ ದುಃಖ ದೇಶವನ್ನು ಬಾಧಿಸಲಿದೆ. ಮೇಘ ಸ್ಫೋಟ, ಯುದ್ಧ, ಅರಸನಾಲಯಕ್ಕೆ ಕಾರ್ಮೋಡ ಕವಿಯಲಿದೆ. ಇದು ರಾಜ್ಯಕ್ಕೂ, ದೇಶಕ್ಕೂ ಅನ್ವಯಿಸಲಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯರಿಗೆ ಏನೂ ತೊಂದರೆ ಇಲ್ಲ. ಯುದ್ಧ ನಿಲ್ಲುವುದು ಸಂವತ್ಸರ ಪರ್ವದಲ್ಲಿ ಕಷ್ಟ. ದ್ವೇಷ, ಅಸೂಯೆಗೆ ಒಂದಿಬ್ಬರು ಬಲಿಯಾಗುತ್ತಾರೆ. ಊಹಿಸಲಾರದ ದುಃಖ ಈ ಭಾರತಕ್ಕೂ ಬರುತ್ತದೆ” ಎಂದರು.

“ಸಂಕ್ರಾಂತಿ ಒಳಗೆ ಮೇಘ ಸ್ಫೋಟವಾಗುವ ಸಾಧ್ಯತೆ ಇದೆ ಹಾಗೂ ಜನಜೀವನ ಅಸ್ಥಿರವಾಗುತ್ತದೆ. ಮನೆಯಿಂದ ಹೊರ ಹೋದವರು ಯಾವಾಗ ವಾಪಸ್‌ ಬರುತ್ತಾರೆ ಎಂದು ಹೇಳುವುದು ಕಷ್ಟ. ಜನವರಿ ಒಳಗೆ ಒಂದು ದೊಡ್ಡ ಗಂಡಾಂತರವೂ ದೇಶಕ್ಕೆ ಇದೆ. ಸಾಗರದಲ್ಲಿ ಜಲಸ್ಫೋಟವೂ ಆಗಲಿದೆ. ಸೂ …. ಮಗನುಟ್ಟಿ, ಆಳುವನು ಮುನಿಪುರವ, ಯುದ್ಧವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು” ಎಂದು ನುಡಿದ ಶ್ರೀಗಳು, ಇದರರ್ಥವನ್ನು ಮುಂದೆ ಹೇಳುತ್ತೇನೆ. ಕೊರೊನಾ ಇನ್ನೊಂದು ರೂಪ ತಾಳಲಿದೆ ಎಂದರು.

21 ಮಂದಿ ಪ್ರಯಾಣಿಕರಿದ್ದ ಹಾಟ್​ ಏರ್​ ಬಲೂನ್ ನಲ್ಲಿ ಬೆಂಕಿ..! ಆಗಸದಲ್ಲಿ ನಡೆದ ಘೋರ ದುರಂತದ ವಿಡಿಯೋ ವೈರಲ್..!

ಅಖಾಡಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ..! ಇರಾನ್ 3 ಅಣುಸ್ಥಾವರಗಳ ಮೇಲೆ ವೈಮಾನಿಕ ಬಾಂಬ್ ದಾಳಿ..!

See also  ಒಂದಲ್ಲ ಎರಡಲ್ಲ ಬರೋಬ್ಬರಿ 15 ವರ್ಷದಿಂದ ಈತ ಜೀವಂತ ಶವ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget