Latestಕರಾವಳಿಕೊಡಗುಸುಳ್ಯ

ಕೊಡಗು ಸಂಪಾಜೆ: ಬೆಕ್ಕು ಮರಿಗಳನ್ನು ಬೀದಿಗೆ ಬಿಡುವವರಿಗೆ ತಟ್ಟುವುದೇ ಶಾಪ..? ಮೂರು ಬೆಕ್ಕಿನ ಮರಿಗಳನ್ನು ರಕ್ಷಿಸಿದ ಚೆಂಬು ಗ್ರಾಮದ ಯುವಕ, ವಿಡಿಯೋ ವೀಕ್ಷಿಸಿ

1.5k

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮನುಷ್ಯ ತೀರ ಕಟುಕನಾಗುತ್ತಿದ್ದಾನೆ. ಅಮಾಯಕ ಮೂಕ ಪ್ರಾಣಿಗಳನ್ನು ತನ್ನ ಮನೆಯಿಂದ ರಾಷ್ಟ್ರೀಯ ಹೆದ್ದಾರಿಗೆ ತಂದು ಬಿಡುತ್ತಿದ್ದಾನೆ. ಇದು ನಿಜಕ್ಕೂ ನೋವು ತರುವ ವಿಚಾರ. ಅಂತೆಯೇ ಕೊಡಗು ಜಿಲ್ಲೆಯ ಸಂಪಾಜೆಯ ಪೆಟ್ರೋಲ್ ಪಂಪ್ ಸಮೀಪ ಯಾರೋ ದುಷ್ಕರ್ಮಿಗಳು ಮೂರು ಬೆಕ್ಕಿನ ಮರಿಗಳನ್ನು ರಾಷ್ಟ್ರೀಯ ಹೆದ್ದಾರಿಗೆ ತಂದು ಬಿಟ್ಟು ಹೋಗಿದ್ದಾರೆ.

ಈ ಬೆಕ್ಕಿನ ಮರಿಗಳು ಹೆದ್ದಾರಿಯ ತುಂಬೆಲ್ಲ ಓಡಾಡಿಕೊಂಡಿದ್ದವು. ಇದನ್ನು ನೋಡಿದ ಚೆಂಬು ಗ್ರಾಮದ ಪೂಜಾರಿ ಗದ್ದೆಯ ಸೆಂಟ್ರಿಂಗ್ ಕೆಲಸ ಮಾಡುವ ಯುವಕ ಮಂಥನ್ (20 ವರ್ಷ) ಮರುಗಿದ್ದಾರೆ. ವಾಹನಗಳ ಚಕ್ರದ ಅಡಿಗೆ ಬಿದ್ದು ಪುಟಾಣಿ ಮರಿಗಳು ಸಾಯುವುದು ಬೇಡ ಎಂದು ಆ ಮೂರೂ ಮರಿಗಳನ್ನು ರಕ್ಷಿಸಿ ತನ್ನ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಈ ಮುದ್ದಾದ ಮರಿಗಳು ಈಗ ಅವರ ಮನೆಯಲ್ಲಿ ಸೇಫ್ ಆಗಿವೆ.

 

View this post on Instagram

 

A post shared by News not out (@newsnotout)

‘ಮರಿಗಳನ್ನು ಬೀದಿಗೆ ಬಿಟ್ಟ ಕಟುಕರು ಯಾಕೆ ತಮ್ಮ ಮಕ್ಕಳನ್ನು ಬೀದಿಗೆ ಬಿಡಬಾರದು..? ಅಂಥಹವರಿಗೆ ದೇವರೇ ಸರಿಯಾಗಿ ಶಿಕ್ಷೆ ನೀಡಬೇಕು, ಯಾರೂ ಕೂಡ ಇಂತಹ ಕೆಲಸ ಮಾಡಬೇಡಿ, ಪಾಪ ಕಟ್ಟಿಕೊಳ್ಳಬೇಡಿ’ ಎಂದು ಮಂಥನ್ ತಿಳಿಸಿದ್ದಾರೆ.

 

See also  ವಿಮಾನ ದುರಂತದಲ್ಲಿ ಕ್ಯಾಪ್ಟನ್‌ ಸುಮಿತ್‌ ನ ಕೊನೆ ಕ್ಷಣದ ಆಡಿಯೋ ಲಭ್ಯ..! ಅಷ್ಟಕ್ಕೂ ವಿಮಾನದೊಳಗೆ ನಡೆದದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget