ಕರಾವಳಿಕೊಡಗು

ಮಡಿಕೇರಿ:ದ್ವಿಚಕ್ರ ವಾಹನ ಢಿಕ್ಕಿಯಾಗಿ ದುರಂತ ಅಂತ್ಯ ಕಂಡ ಸವಾರ,ಮೂರು ದಿನವಾದರೂ ಇನ್ನೂ ಪತ್ತೆಯಾಗದ ವಾರಿಸುದಾರರು..!

245

ನ್ಯೂಸ್ ನಾಟೌಟ್ :ದ್ವಿಚಕ್ರ ವಾಹನ ಢಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ದುರಂತ ಅಂತ್ಯಗೊಂಡ ಘಟನೆ ವರದಿಯಾಗಿತ್ತು.ಕೊಡಗಿನ ಪೊನ್ನಂಪೇಟೆ ಕಾನೂರು ರಸ್ತೆಯಲ್ಲಿ ನ. 19ರಂದು ಸಂಭವಿಸಿದ್ದ ಈ ಘಟನೆಯಲ್ಲಿ ಬಾಲ ಎನ್ನುವವರು ಉಸಿರು ಚೆಲ್ಲಿದ್ದರು.ಆದರೆ ಇವರ ವಾರಿಸುದಾರರು ಇನ್ನೂ ಯಾರೆಂದು ತಿಳಿಯದೇ ಇರುವುದರಿಂದ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಏನಿದು ಘಟನೆ?: ನ. 19ರಂದು ಬೆಳಗ್ಗೆ ದ್ವಿಚಕ್ರ ವಾಹನ ಢಿಕ್ಕಿಯಾಗಿ ಬಾಲ ಅವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್‌. ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ರಾತ್ರಿ ಅವರು ಬಾರದ ಲೋಕಕ್ಕೆ ತೆರಳಿದ್ದರು.ಬಾಲ ಅವರ ಸಂಬಂಧಿಕರು ಯಾರು ಹಾಗೂ ಊರು ಯಾವುದೆಂದು ತಿಳಿಯದ ಹಿನ್ನೆಲೆ ವಾರಿಸುದಾರರು ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಪೊನ್ನಂಪೇಟೆ ಪೊಲೀಸರು ಮನವಿ ಮಾಡಿದ್ದಾರೆ.ಈ ಮಧ್ಯೆ ಬೈಕ್‌ ಸವಾರ ಪರಾರಿಯಾಗಿದ್ದು, ಸಾಕ್ಷ್ಯಾಧಾರ ಗಳನ್ನು ಕಲೆಹಾಕಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್‌. ಮೋಹನ್‌ಕುಮಾರ್‌, ಗೋಣಿಕೊಪ್ಪ ವೃತ್ತದ ಸಿಪಿಐ ಗೋವಿಂದರಾಜು, ಪೊನ್ನಂಪೇಟೆ ಪೊಲೀಸ್‌ ಠಾಣೆಯ ಪಿಎಸ್‌ಐ ನವೀನ್‌.ಜಿ ಹಾಗೂ ಸಿಬ್ಬಂದಿಗಳು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಕಲ್ಲುಗುಂಡಿ: ಕೊರಗಜ್ಜನ ಸನ್ನಿಧಿಗೆ ಬಂದ ಮಹಿಳೆಯ ಪರ್ಸ್ ಬಸ್ ನಲ್ಲಿ ಮಿಸ್ಸಿಂಗ್..! ಸಿಕ್ಕಿದವರು ಹಿಂತಿರುಗಿಸಬೇಕಾಗಿ ಮನವಿ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget