ರಾಜಕೀಯರಾಜ್ಯ

ಕೆ.ಎಂ.ಎಫ್‌ ಒಕ್ಕೂಟದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು(ಜು.12) ಮತದಾನ, ಕುತೂಹಲ ಸೃಷ್ಟಿಸಿದ ಬಿಜೆಪಿ-ಕಾಂಗ್ರೆಸ್ ಪೈಪೋಟಿ..!

149

ನ್ಯೂಸ್ ನಾಟೌಟ್: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೆಎಂಎಫ್‌)ದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಜು.12 ರಂದು(ಇಂದು) ಮತದಾನ ನಡೆಯಲಿದ್ದು, ಇದು ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಗೆ ಸೇರಿವೆ. ಬೆಂಬಲಿತರಿಗೆ ಅಧಿಕಾರದ ಪಟ್ಟ ಕಟ್ಟಲು ಬಿಜೆಪಿ- ಕಾಂಗ್ರೆಸ್‌ ರಾಜಕೀಯ ಕಸರತ್ತು ನಡೆಸುತ್ತಿವೆ.

ಕೆ.ಎಂ.ಎಫ್‌ ಆಡಳಿತ ಮಂಡಳಿಯ 9 ನಿರ್ದೇಶಕ ಸ್ಥಾನಗಳಿಗೆ ಜೂ.30 ರಂದು ಚುನಾವಣೆ ನಡೆದಿತ್ತು. ಇದರಲ್ಲಿ 7 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದರು. ಇಬ್ಬರು ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದರು. ಆದರೆ, ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆದಿರುವ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಹಾಗೂ ನಾಲ್ವರು ಪದನಿಮಿತ್ತ ನಿರ್ದೇಶಕರ (ಸರಕಾರಿ ಅಧಿಕಾರಿಗಳ) ಬೆಂಬಲ ಪಡೆದು ಕಾಂಗ್ರೆಸ್‌ ಇಲ್ಲಿ ಗದ್ದುಗೆ ಏರಲು ಹೊರಟಿವೆ.

ಕೆಎಂಎಫ್‌ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ಚುನಾಯಿತ, ನಾಮನಿರ್ದೇಶಿತ ಹಾಗೂ ಪದನಿಮಿತ್ತ ನಿರ್ದೇಶಕರು ಸೇರಿ ಒಟ್ಟು 14 ಜನ ಮತದಾನದ ಹಕ್ಕು ಪಡೆದಿದ್ದಾರೆ. ಈಗಾಗಲೇ 7 ಚುನಾಯಿತ ನಿರ್ದೇಶಕರು ಹಾಗೂ ಹೊಸದಿಲ್ಲಿಯ ನ್ಯಾಷನಲ್‌ ಡೇರಿ ಡೆವಲಪ್‌ಮೆಂಟ್‌ ಬೋರ್ಡ್‌ (ಎನ್‌ಡಿಡಿಬಿ) ಪ್ರತಿನಿಧಿ ಸೇರಿ 8 ಮತಗಳ ಬಲ ಬಿಜೆಪಿಗಿದೆ ಎನ್ನಲಾಗಿದೆ.

Click 👇

https://newsnotout.com/2024/07/elephant-no-more-viral-video-due-to-rail-collision-kannda-news-assam
https://newsnotout.com/2024/07/forest-department-kannada-news-elephant-issue-in-deserve-forest-area
See also  ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ |ಚಿದಾನಂದ ಕೆವಿ ಅವರ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಭೇಟಿ, ಹಲವಾರು ಕಾಂಗ್ರೆಸ್ ನಾಯಕರು ಭಾಗಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget