ಕರಾವಳಿ

ಮಹಿಳೆಯೊಂದಿಗೆ ವೈದ್ಯನ ಅಸಭ್ಯ ವರ್ತನೆ,  ಇದೀಗ ವೈದ್ಯನ ಮೃತ ದೇಹವೇ ಪತ್ತೆ

351

ವರದಿ: ರಸಿಕಾ ಮುರುಳ್ಯ

ನ್ಯೂಸ್ ನಾಟೌಟ್: ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿ ತಲೆಮರೆಸಿಕೊಂಡಿದ್ದ ವೈದ್ಯನ ಮೃತದೇಹ ಪತ್ತೆಯಾಗಿದೆ.

ಕಾಸರಗೋಡಿನ ಬದಿಯಡ್ಕದ ದಂತ ವೈದ್ಯರಾದ ಡಾ. ಎಸ್ ಕೃಷ್ಣ ಮೂರ್ತಿ (57)  ಕೆಲವು ದಿನಗಳ ಹಿಂದೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇತ್ತ ಪೊಲೀಸರ ತನಿಖೆ ನಡೆಯುತ್ತಿರುವಾಗಲೇ ಡಾ. ಎಸ್ ಕೃಷ್ಣ ಮೂರ್ತಿ ಪರಾರಿಯಾಗಿದ್ದರು, ಇವರಿಗಾಗಿ ಹುಡುಕಾಟ ಮುಂದುವರಿದಿತ್ತು. ಆದರೆ ಇದೀಗ ಅವರ ಮೃತದೇಹ ಪತ್ತೆಯಾಗಿದೆ. ಸ್ವಂತ ಕ್ಲಿನಿಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ  ವೈದ್ಯ  ಬೈಕ್ ಅನ್ನು ಕುಂಬಳೆ ಪೇಟೆಯಲ್ಲಿ ಬಿಟ್ಟಿದ್ದರು. ಅಲ್ಲದೆ ಮೊಬೈಲ್ ಅನ್ನು ಕ್ಲಿನಿಕ್ ನಲ್ಲೆ ಬಿಟ್ಟು ಹೋಗಿದ್ದರು. ವೈದ್ಯರಿಗೆ ಮಹಿಳೆಯ ಮನೆಯವರು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ಪರಾರಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇದೀಗ ಕುಂದಾಪುರದಲ್ಲಿ ಪ್ರಕರಣ ದಾಖಲಾಗಿದೆ.

See also  ಸೌಜನ್ಯ ಪ್ರಕರಣ: ಮರು ತನಿಖೆಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್..! ಸೌಜನ್ಯ ಪೋಷಕರಿಗೆ ಭಾರೀ ಹಿನ್ನಡೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget