ಕರಾವಳಿದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ ಎಂದು ನಟ ಸುದೀಪ್ ಅನ್ನು ಪ್ರಶ್ನಿಸಿದ ಪತ್ರಕರ್ತ, ಗರಂ ಆಗಿ ಉತ್ತರಿಸಿದ ಕಿಚ್ಚ..!

170

ನ್ಯೂಸ್‌ ನಾಟೌಟ್‌: ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ ಎಂದು ಪ್ರಶ್ನಿಸಿದ ಪತ್ರಕರ್ತನಿಗೆ ನಟ ಕಿಚ್ಚ ಸುದೀಪ್‌ ಖಡಕ್ ಉತ್ತರ ಕೊಟ್ಟಿದ್ದಾರೆ. ಮೋದಿ ಅವರ ನಿವಾಸಕ್ಕೆ ಹೋಗಿ ಇಲ್ಲ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಹೋಗಿ ಅಲ್ಲಿ ಸ್ಟ್ರೈಕ್ ಮಾಡಿ ಎಂದು ಸುದೀಪ್ ಗರಂ ಆಗಿ ಉತ್ತರಿಸಿದ್ದಾರೆ.

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ ಸೀಸನ್ 11 ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, ಸೋಮವಾರ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದರು.

‘ಹೆಚ್ಚು ತಿಳುವಳಿಕೆ ಇರುವಂತ ಸಮಾಜ ನಮ್ಮದ್ದು, ಬುದ್ಧಿವಂತಿಕೆ ಇರುವ ಸಮಾಜ ಇದು. ಇಲ್ಲಿ ಸಿಗರೇಟ್ ಇದೆ, ಕುಡಿತ ಇದೆ ಸಾಕಷ್ಟಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ ತಾಯಿ ಇದ್ದಾರೆ. ನಮಗೆ ಏನು ಬೇಕು ನಾವು ಆಯ್ಕೆ ಮಾಡಬೇಕು. ಸರ್ಕಾರ ನಮ್ಮಿಂದ ತುಂಬಾ ಟ್ಯಾಕ್ಸ್ ತೆಗೆದುಕೊಳ್ಳುತ್ತಿದ್ದಾರೆ ತುಂಬಾ ದುಡ್ಡು ವಸೂಲಿ ಮಾಡುತ್ತಿದ್ದಾರೆ ಅನಿಸುತ್ತದೆ ಆದರೆ ದೇಶ ನಡೆಸುವುದಕ್ಕೆ ಸರ್ಕಾರ ಏನು ಮಾಡಬೇಕು ಅದನ್ನು ಮಾಡಲೇಬೇಕು. ಈ ರೀತಿ ದೊಡ್ಡ ಶೋ ನಡೆಸುವುದಕ್ಕೆ ಬಿಗ್ ಬಾಸ್‌ ತಂಡದವರು ಕೂಡ ಅವರ ಕೆಲಸ ಮಾಡಬೇಕು ಏಕೆಂದರೆ ಒಂದು ದೊಡ್ಡ ಶೋ ಮಾಡಲು ಅಷ್ಟೇ ಖರ್ಚು ಆಗುತ್ತದೆ.

ಬಿಗ್ ಬಾಸ್ ಕಾರ್ಯಕ್ರಮದಿಂದ ಎಷ್ಟು ಮನೆಗಳು ಉದ್ದಾರ ಅಯ್ತು ಎಷ್ಟು ವ್ಯಕ್ತಿತ್ವಗಳು ಉದ್ದಾರ ಆಯ್ತು ಎಷ್ಟು ಜನರಿಗೆ ಕೆಲಸ ಸಿಗ್ತು..ಇಲ್ಲಿ ಕೆಲಸ ಗಿಟ್ಟಿಸಿಕೊಂಡವರು A23 ರಮ್ಮಿಯನ್ನು ಆಯ್ಕೆ ಮಾಡಿಕೊಂಡ್ರಾ ಇಲ್ಲ ಏನು ಕೆಲಸ ಮಾಡಿದ್ದರು ಅದರಿಂದ ಏನು ಕಲಿತರು ಹೀಗೆ ನಾನು ದೊಡ್ಡದಾಗಿ ಯೋಚನೆ ಮಾಡಲು ಇಷ್ಟ ಪಡುತ್ತೀನಿ. ನನ್ನ ಪ್ರಕಾರ ಸಮಾಜದಲ್ಲಿ ಇರುವ ಪ್ರತಿಯೊಬ್ಬರು ತಿಳುವಳಿಕೆ ಇರುವವರು. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ನಮಗೆ ಒಂದು ಕುಟುಂಬ, ಒಬ್ಬಳೆ ಹೆಂಡತಿ ಮತ್ತು ಒಬ್ಬರೆ ತಂದೆ ತಾಯಿ ಇದ್ದಾರೆ. ಮೋದಿ ಅವರ ನಿವಾಸಕ್ಕೆ ಹೋಗಿ ಇಲ್ಲ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಹೋಗಿ ಅಲ್ಲಿ ಸ್ಟ್ರೈಕ್ ಮಾಡಿ’ ಎಂದು ಸುದೀಪ್ ಗರಂ ಆದ ಘಟನೆ ನಡೆಯಿತು.

ಬಿಗ್ ಬಾಸ್ ಮುಖ್ಯಸ್ಥರಾದ ಪ್ರಶಾಂತ್ ಮಾತನಾಡಿ, ‘A23 rummy ಅವರು ನಮಗೆ ಕ್ಲೈಂಟ್ ಆಗಿರುತ್ತಾರೆ ನಾವು ಖರೀದಿ ಮಾಡಿರುತ್ತಾರೆ ನಾವು ಏನೂ ಹೇಳುವುದಕ್ಕೆ ಆಗಲ್ಲ’ ಎನ್ನುವ ಗೊಂದಲದ ಉತ್ತರ ನೀಡಿದ್ದಾರೆ.

‘ರಮ್ಮಿ ಆಟವಾಡುವುದನ್ನು ನಮ್ಮ ರಾಜ್ಯದಲ್ಲಿ ಬ್ಯಾನ್ ಮಾಡಿಲ್ಲ ಆಟವಾಡಲು ಅನುಮತಿ ಇದೆ. ನಮ್ಮ ಭಾರತ ಸರ್ಕಾರ ಇದನ್ನು ತಡೆಯುವುದರ ಬಗ್ಗೆ ನಿರ್ಧಾರ ಮಾಡಬೇಕು. ನಿಮಗೆ ತಪ್ಪು ಅನಿಸಿದ್ದು ಮತ್ತೊಬ್ಬರಿಗೆ ಸರಿ ಅನಿಸಬಹುದು ಆದರೆ ನಾವು ಯಾವುದೇ ಕಾರಣಕ್ಕೆ ಸರ್ಕಾರದ ನಿಮಯ ಉಲ್ಲಂಘನೆ ಮಾಡುವುದಿಲ್ಲ. ಒಂದರಿಂದ ಒಳ್ಳೆಯದು ಆಗುತ್ತದೆ ಅಂದ್ರೂ ಅದನ್ನು ದುರ್ಬಳಕೆ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಇದು ಸಂಪೂರ್ಣವಾಗಿ ಕಂಪನಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಬಿಗ್ ಬಾಸ್ ಆಯೋಜಕರ ತಂಡದ ಸದಸ್ಯರು ಹೇಳಿದ್ದಾರೆ.

See also  ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಗೆ ಹರಿದು ಬಂದ ಹೊರೆಕಾಣಿಕೆ

Click

https://newsnotout.com/2024/09/4-year-old-babyies-are-misused-by-school-staff-kannada-news-encountered/
https://newsnotout.com/2024/09/tirupati-telangana-kannada-news-devotee-allegation-kannada-news/
https://newsnotout.com/2024/09/294-mobiles-phones-are-exports-illegally-to-nepal-cought-kannada-news/

  Ad Widget   Ad Widget   Ad Widget   Ad Widget   Ad Widget   Ad Widget   Ad Widget