ನ್ಯೂಸ್ನಾಟೌಟ್: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಖಲಿಸ್ತಾನ್ ಪ್ರತ್ಯೇಕವಾದಿ ಅಮೃತ್ ಪಾಲ್ ಸಿಂಗ್ ಹಾಗೂ ಆತನ ಅನುಯಾಯಿಗಳನ್ನು ಪಂಜಾಬ್ ಪೊಲೀಸರು ಶನಿವಾರ ಸಾಯಂಕಾಲ ಜಲಂಧರ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜತೆಗೆ ಎರಡು ವಾಹನಗಳನ್ನು ಇದೇ ವೇಳೆ ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಆತನ ವಿರುದ್ದ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಅಮೃತ್ ಪಾಲ್ ಸಿಂಗ್ ಬಂಧನದ ಬಳಿಕ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಈ ಹಿಂದೆ ಮರ್ಸಿಡಿಸ್ ಕಾರಿನಲ್ಲಿ ಓಡಾಡುತ್ತಿದ್ದ ಆತ ಬೇರೆ ಕಾರು ಖರೀದಿಸಿ ಭೂಗತನಾಗಿದ್ದ. ಸರ್ಕಾರದ ಮೇಲೆ ಹಲವು ದಿನಗಳಿಂದ ಆತನ ಬಂಧನಕ್ಕಾಗಿ ಒತ್ತಡಗಳಿದ್ದವು. ಇದೀಗ ಆತ ಪೊಲೀಸ್ ಬಲೆಗೆ ಬಿದ್ದಿದ್ದಾನೆ.