ಕರಾವಳಿಕಾಸರಗೋಡುದೇಶ-ವಿದೇಶರಾಜಕೀಯ

Kerala election result: ಕೊಯಮತ್ತೂರಿನಲ್ಲಿ ‘ಸಿಂಗಂ’ ಅಣ್ಣಾಮಲೈಗೆ ಸೋಲು, ಕೇರಳದಲ್ಲಿ ಖಾತೆ ತೆರೆದು ಇತಿಹಾಸ ಸೃಷ್ಟಿಸಿದ ಬಿಜೆಪಿ

176

ನ್ಯೂಸ್ ನಾಟೌಟ್: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಸೋಲು ಅನುಭವಿಸಿದ್ದಾರೆ. ಅವರು 17 ಸಾವಿರದ ಮತಗಳ ಅಂತರದ ಕಹಿ ಅನುಭವಿಸಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ನೆಲೆಗೊಳಿಸುವುದಕ್ಕೆ ಅಣ್ಣಾಮಲೈ ಪ್ರಯತ್ನ ನಡೆಸಿದ್ದರು. ತನ್ನ ಅಸ್ತಿತ್ವವೇ ಇಲ್ಲದ ನೆಲದಲ್ಲಿ ಅತ್ಯಂತ ರೋಚಕ ಸ್ಪರ್ಧೆ ನೀಡುವ ಮೂಲಕ ಅಣ್ಣಾಮಲೈ ಸೋಲಿನಲ್ಲೂ ಗೆಲುವು ಕಂಡಿದ್ದಾರೆ.

ಕೇರಳದಲ್ಲಿ ಬಿಜೆಪಿ ತನ್ನ ಖಾತೆ ತೆರೆದಿದೆ. ತ್ರಿಶೂರ್ ನಲ್ಲಿ ಬಿಜೆಪಿ ಅಭ್ಯರ್ಥಿ ಸಿನಿಮಾ ನಟ ಸುರೇಶ್ ಗೋಪಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿಯ ಖಾತೆಯೊಂದು ಕೇರಳದಲ್ಲಿ ಓಪನ್ ಆಗಿದೆ. ಕಳೆದ ಒಂದು ವರ್ಷಗಳಿಂದ ಅವರು ನಿರಂತರ ಪ್ರಯತ್ನ ನಡೆಸಿದ್ದರು. ಬಿಜೆಪಿಯ ಗೆಲುವಿಗೆ ಕಾರಣರಾಗಿದ್ದಾರೆ.

Click 👇

https://newsnotout.com/2024/06/election-padmaraj-and-brijish-kannada-news
https://newsnotout.com/2024/06/loka-sabha-result-news-stars
https://newsnotout.com/2024/06/election-and-tv-court-issued-notice
https://newsnotout.com/2024/06/strong-room-key-kannada-news-vijayapura
See also  ಮಂಗಳೂರು: ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ..! ಚುನಾವಣಾ ಆಯೋಗದಿಂದ ನೋಟಿಸ್​
  Ad Widget   Ad Widget   Ad Widget   Ad Widget   Ad Widget   Ad Widget   Ad Widget