ಕರಾವಳಿರಾಜಕೀಯ

ಅನ್ನಭಾಗ್ಯ (Anna bhaghya): ಅಕ್ಕಿಯ ಬದಲು ಹಣ ನೀಡಲು ನಿರ್ಧಾರ..!ಕಾಂಗ್ರೆಸ್‌ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದೇಕೆ..?

ನ್ಯೂಸ್‌ ನಾಟೌಟ್‌: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ (Anna bhaghya ) ಯೋಜನೆಯನ್ನು ಸರ್ಕಾರ ಮಾರ್ಪಾಡು ಮಾಡಿದ್ದು, 5 ಕೆ.ಜಿ. ಅಕ್ಕಿಯ ಜತೆಗೆ ಉಳಿದ ಐದು ಕೆ.ಜಿ. ಅಕ್ಕಿಯ ಹಣವನ್ನು ಫಲಾನುಭವಿಗಳಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಅಕ್ಕಿ ದಾಸ್ತಾನು ಕೊರತೆ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. 1 ಕೆ.ಜಿಗೆ ೩೪ ರೂಪಾಯಿಯಂತೆ 5 ಕೆ.ಜಿ. ಅಕ್ಕಿಗೆ 170 ರೂ. ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.

ಜುಲೈ ತಿಂಗಳಲ್ಲೇ ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ ಎಂದು ತಿಳಿಸಿದ್ದಾರೆ.

Related posts

ಹೊರಗಡೆ ಹೋದಾಗ ರುಚಿ ರುಚಿಯಾದ ಅವಿಲ್ ಮಿಲ್ಕ್ ಬೇಕೆನಿಸುತ್ತಾ? ಕೇರಳ ಶೈಲಿಯ ಅವಿಲ್ ಮಿಲ್ಕ್ ಇನ್ಮುಂದೆ ಸುಳ್ಯದಲ್ಲಿಯೂ ಲಭ್ಯ..!ಎಲ್ಲಿದೆ?ಏನಿದರ ವಿಶೇಷತೆ?

ಅಂಚೆ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾವುದೇ ರೀತಿಯ ಪರೀಕ್ಷೆ ಮತ್ತು ಸಂದರ್ಶನ ನೀಡಬೇಕಾಗಿಲ್ಲ..?

ಉಡುಪಿ: ಪ್ರತಿಭಾನ್ವಿತ ನೃತ್ಯಪಟು ಚಿಕಿತ್ಸೆ ಫಲಿಸದೇ ದುರಂತ ಅಂತ್ಯ,ಆಗಿದ್ದೇನು?