Latestಕ್ರೈಂರಾಜಕೀಯರಾಜ್ಯ

ಕರ್ನಾಟಕದಿಂದ ರೈತರು ಮೆಣಸಿನಕಾಯಿ ಕೊಂಡೊಯ್ಯುತ್ತಿದ್ದ 10 ಲಾರಿಗಳು ತೆಲಂಗಾಣದಲ್ಲಿ ಪೊಲೀಸ್ ವಶಕ್ಕೆ..! ತಹಶೀಲ್ದಾರ್ ಪತ್ರಕ್ಕೂ ‘ಕ್ಯಾರೆ ಅನ್ನುತ್ತಿಲ್ಲ’ ಅಲ್ಲಿನ ಪೊಲೀಸರು..?

927

ನ್ಯೂಸ್ ನಾಟೌಟ್: ರಾಯಚೂರಿನಿಂದ ಗುಂಟೂರಿಗೆ ಮಾರಾಟಕ್ಕೆ ಹೊರಟಿದ್ದ ಮೆಣಸಿನಕಾಯಿಯ 10ಕ್ಕೂ ಹೆಚ್ಚು ಲಾರಿಗಳನ್ನು ತೆಲಂಗಾಣ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ರೈತರು ಶನಿವಾರ(ಮಾ.22) ರಾತ್ರಿ ಗುಂಟೂರಿಗೆ ಮೆಣಸಿನಕಾಯಿ ಮಾರಾಟಕ್ಕಾಗಿ ಹೊರಟಿದ್ದರು. ಈ ವೇಳೆ ತೆಲಂಗಾಣದ ನಲ್ಲಗೊಂಡಾ ಜಿಲ್ಲೆಯ ಕೊಂಡಮಲ್ಲೆಪಲ್ಲಿಯಲ್ಲಿ ಪೊಲೀಸರು ಹಾಗೂ ಸೇಲ್ಸ್ ಟ್ಯಾಕ್ಸ್ ಅಧಿಕಾರಿಗಳು 10 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮೆಣಸಿನಕಾಯಿಗೆ ಸೆಲ್ಸ್ ಟ್ಯಾಕ್ಸ್ ಮತ್ತು ಜಿಎಸ್‌ ಟಿ ಕಟ್ಟುವಂತೆ ಒತ್ತಾಯಿಸಿ, ಬಳಿಕ ಲಾರಿಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.

ಮೆಣಸಿನಕಾಯಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ತೆಲಂಗಾಣದಲ್ಲಿ ಅಧಿಕಾರಿಗಳು ಶಾಕ್ ನೀಡಿದ್ದು, ಅಗತ್ಯ ದಾಖಲೆಗಳನ್ನು ತೋರಿಸಿದರೂ ಕೂಡ ಲಾರಿಗಳನ್ನು ಬಿಡದೇ ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಹಣಿ, ತಹಶೀಲ್ದಾರ್ ಪತ್ರವನ್ನು ತೋರಿಸಿದರೇ ಅದಕ್ಕೂ ಬೆಲೆ ಕೊಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಈ ಕುರಿತು ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸುವಂತೆ ರೈತರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ವಾಟ್ಸಪ್‌ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ 10.49 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ..! ಪಿ.ಎಂ.ಕಿಸಾನ್ ಯೋಜನೆ ಹೆಸರಿನಲ್ಲಿ ವಂಚನೆ..!

See also  ಪುತ್ತೂರು: ಹೆರಿಗೆ ವೇಳೆ ತೀವ್ರ ರಕ್ತಸ್ರಾವ, ಕರಾಯದ ಮಹಿಳೆ ದಾರುಣ ಸಾವು!
  Ad Widget   Ad Widget   Ad Widget   Ad Widget   Ad Widget   Ad Widget