ಚಿಕ್ಕಮಗಳೂರು

ಟ್ರಕ್ಕಿಂಗ್‌ ವೇಳೆ ಯುವಕ ನಾಪತ್ತೆ; ಗುಡ್ಡದ ತುದಿಯಲ್ಲಿ ಸಾಕ್ಷಿ ನುಡಿಯಿತು ಟೀ ಶರ್ಟ್ , ಮೊಬೈಲ್,ಸ್ಲಿಪ್ಪರ್ ..!

151

ನ್ಯೂಸ್ ನಾಟೌಟ್ : ಬೆಂಗಳೂರಿನಿಂದ ಟ್ರಕ್ಕಿಂಗ್ ಹೋಗಿದ್ದ ಯುವಕನೊಬ್ಬ ಮಿಸ್ಸಿಂಗ್ (Missing Case) ಆದ ಘಟನೆ ವರದಿಯಾಗಿದೆ.ಭರತ್ ನಾಪತ್ತೆಯಾಗಿರುವ ಯುವಕ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿರುವ ರಾಣಿಝರಿ ಪಾಯಿಂಟ್‌ನಲ್ಲಿ ಈ ಘಟನೆ ಸಂಭವಿಸಿದ್ದು ಬೆಳಕಿಗೆ ಬಂದಿದೆ.ಈತ ರಾಣಿಝರಿ ಪಾಯಿಂಟ್‌ನಲ್ಲಿ ಬೈಕ್ ನಿಲ್ಲಿಸಿದ್ದು, ಬಳಿಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.ಇದಕ್ಕೆ ಸಂಬಂಧ ಪಟ್ಟ ಹಾಗೆ ಕೆಲವು ಸಾಕ್ಷಿ ಲಭ್ಯವಾಗಿವೆ.ಗುಡ್ಡದ ತುದಿಯಲ್ಲಿ ಆತನ ಟೀ ಶರ್ಟ್, ಸ್ಲಿಪ್ಪರ್‌ ಜತೆಗೆ ಮೊಬೈಲ್ ಕೂಡ ಪತ್ತೆಯಾಗಿದೆ.

ಹಾಗಾದರೆ ಆತ ಎಲ್ಲಿದ್ದಾನೆ ಅನ್ನೋದೇ ಸದ್ಯ ಗೊಂದಲದ ವಿಷಯವಾಗಿದೆ. ಬಿ.ಇ ಮುಗಿಸಿರುವ ಭರತ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.ಬೆಂಗಳೂರಿನಿಂದ ಹಾರ್ನೆಟ್ ಬೈಕ್‌ನಿಂದ ದುರ್ಗದಹಳ್ಳಿಗೆ ಬಂದಿದ್ದ ಭರತ್ ಅನಂತರ ಕಾಣೆಯಾಗಿದ್ದಾನೆ. ಇತ್ತ ಭರತ್‌ ಪೋಷಕರು ಮಗನಿಗಾಗಿ ಹುಡುಕಿಕೊಂಡು ಬಂದಿದ್ದಾರೆ. ಸದ್ಯ ಕಾಣೆಯಾಗಿರುವ ಭರತ್‌ಗಾಗಿ ಶೋಧ ಕಾರ್ಯ ಆರಂಭವಾಗಿದೆ. ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಭರತ್‌ಗಾಗಿ ಹುಡುಕಾಟ ನಡೆಸಿದ್ದಾರೆ.

See also  ನಿಮ್ಮ ತಾಲೂಕಿನಿಂದಲೇ ಬ್ಯುಸಿನೆಸ್ ಆರಂಭಿಸಿ, AI ಕಾರ್ಡ್ ತೆರೆದಿಟ್ಟಿದೆ ಅವಕಾಶಗಳ ಹೆಬ್ಬಾಗಿಲು, ಈಗಲೇ ಕರೆ ಮಾಡಿ ನಿಮ್ಮ ಬ್ಯುಸಿನೆಸ್ ಆರಂಭಿಸಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget