ಉಡುಪಿಕರಾವಳಿಕ್ರೈಂರಾಜ್ಯ

ಕಾರ್ಕಳ: ಮೈಕ್ ​ಗೆ ಅನುಮತಿ ಪಡೆದಿಲ್ಲವೆಂದು ಯಕ್ಷಗಾನ ನಿಲ್ಲಿಸಿದ ಪೊಲೀಸರು..! ಯಕ್ಷಗಾನ ಮಂಡಳಿಯ ಅಧ್ಯಕ್ಷ ಮತ್ತು ಸೌಂಡ್ಸ್ ​​ನ ಮುಖ್ಯಸ್ಥನ ವಿರುದ್ಧ ಕೇಸ್..!

ನ್ಯೂಸ್ ನಾಟೌಟ್: ಮೈಕ್​​ ಗೆ ಅನುಮತಿ ಪಡೆದಿಲ್ಲ ಎಂದು ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗಲೇ ಪೊಲೀಸರಿಂದ ತಡೆದಿರುವಂತಹ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುನಲ್ಲಿ ನಿನ್ನೆ(ಜ.14) ನಡೆದಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಯಕ್ಷಗಾನ ತಡೆಯಲಾಗಿದ್ದು, ಆಯೋಜಕರನ್ನು ಅರೆಸ್ಟ್ ಮಾಡಲು ಮುಂದಾದಾಗ ಎಲ್ಲಾ ಗ್ರಾಮಸ್ಥರನ್ನು ಬಂಧನ ಮಾಡಿ ಎಂದು ಸ್ಥಳದಲ್ಲಿ ಕೋಲಾಹಲ ನಡೆದಿದೆ.

ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಆಯೋಜನೆ ಮಾಡಲಾಗಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಅಜೆಕಾರು ಠಾಣಾ ಉಪ ನಿರೀಕ್ಷಕ ಶುಭಕರ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ದೂರು ದಾಖಲಾದ ಬಗ್ಗೆ ಎಫ್​ಐಆರ್​ ತೋರಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೊಲೀಸ್ ಸ್ಥಳದಿಂದ ತೆರಳಿದ್ದಾರೆ.

ಆಯೋಜಕರು ಜ.10 ರಂದು ಪರವಾನಿಗೆಗಾಗಿ ಪಿಡಿಓ ಬಳಿ ತೆರಳಿದ್ದರು. ಆದರೆ 3 ದಿನಗಳು ಪಿಡಿಓ ರಜೆ ಮೇಲೆ ತೆರಳಿದ್ದಕ್ಕಾಗಿ ಅನುಮತಿ ದೊರೆತಿರಲಿಲ್ಲ. ಬಳಿಕ ಜನವರಿ 13ರಂದು ಅನುಮತಿಗಾಗಿ ಅಜೆಕಾರು ಠಾಣೆಗೆ ಆಯೋಜಕರು ಹೋಗಿದ್ದಾರೆ. ಆದರೆ ಪಂಚಾಯತ್ ಅನುಮತಿ ತರುವಂತೆ ಪೊಲೀಸರು ತಾಕೀತು ಮಾಡಿದ್ದರು.
ಸದ್ಯ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ. ಮಹಾಲಕ್ಷ್ಮೀ ಸೌಂಡ್ಸ್​​ನ ಮುಖ್ಯಸ್ಥ ಅಪ್ಪು ವಿರುದ್ಧವೂ ಕೇಸ್​ ದಾಖಲಿಸಿದ್ದು, ಕಾನೂನು ಕ್ರಮಕ್ಕೆ ಉಡುಪಿ ಪೊಲೀಸರು ಮುಂದಾಗಿದ್ದಾರೆ.

Click

https://newsnotout.com/2025/01/ayyappa-swami-devotees-hit-and-run-kannada-news-8-people/
https://newsnotout.com/2025/01/lakshmi-hebbalkar-kannada-news-doctor-kannada-news-d/
https://newsnotout.com/2025/01/udupi-kannada-news-malpe-jwellery-viral-news/
https://newsnotout.com/2025/01/january-19-kannada-news-ban-tick-tok-in-america-viral-news-fh/
https://newsnotout.com/2025/01/tulu-cinema-rupesh-shetty-and-bollywood-actor-tulunadu/
https://newsnotout.com/2025/01/monkey-illness-kannada-news-132-people-issue-last-year/
https://newsnotout.com/2025/01/mahakumbha-mela-steve-jobs-wife-in-kumbh-mela-kannada-news-health/
https://newsnotout.com/2025/01/mahakumbha-mela-2025-and-muslim-man-arrested-for-suspect-kannada-news/

Related posts

ತಾಯಿಯ ಶವವಿಟ್ಟು ತಂಗಿಗಾಗಿ ಕಾಯುತ್ತಿರುವ ಅಣ್ಣನ ಕರುಣಾಜನಕ ಕಥೆ! ಮಗಳು ಮಾಡಿದ ಸಾಲವೀಗ ಹೆತ್ತಮ್ಮನಿಗೆ ಮುಳುವಾಯ್ತೇ?

ಮದುವೆಗೆ ಬಂದ ವೀಡಿಯೊಗ್ರಾಫರ್ ವರನ ತಂಗಿ ಜೊತೆ ಪರಾರಿ..! ಇಲ್ಲಿದೆ ವಿಚಿತ್ರ ಪೇಮ ಕಹಾನಿ

ಪುತ್ತೂರು : ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ರಾಜ್ಯ ಮಾನವ ಹಕ್ಕು ಆಯೋಗದಿಂದ ದೂರು ದಾಖಲು