ಉಡುಪಿಕರಾವಳಿಕ್ರೈಂ

ಕಾರ್ಕಳ: ನೇಹಾ ಹತ್ಯೆ ಖಂಡಿಸಿ ಪ್ರತಿಭಟಿಸಿದ್ದಕ್ಕೆ ABVP ರಾಜ್ಯ ಸಹಕಾರ್ಯದರ್ಶಿಗಳ ಮೇಲೆ FIR, ‘ಇದು ಕಾಂಗ್ರೆಸ್ ಗ್ಯಾರಂಟಿ’ ಎಂದು ಸಿಡಿದ ಟೀಮ್ ABVP

208

ನ್ಯೂಸ್ ನಾಟೌಟ್: ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಎಬಿವಿಪಿ ಕಟು ಪದಗಳಿಂದ ಖಂಡಿಸಿದೆ. ಮಾತ್ರವಲ್ಲ ನ್ಯಾಯ ನೀಡಬೇಕೆಂದು ಆಗ್ರಹಿಸಿ ಕಾರ್ಕಳದಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆಯನ್ನೂ ನಡೆಸಿದೆ.

ಈ ವೇಳೆ ಪ್ರತಿಭಟನೆ ನಡೆಸಿದ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಪೂಜಾರಿ ಹಾಗೂ ಗಣೇಶ್ ಪೂಜಾರಿ ಮೇಲೆ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸರ್ಕಾರದ ಈ ನಡೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸಿದೆ. ಕಾರ್ಯಕರ್ತರ ವಿರುದ್ಧ ದಾಖಲಿಸಿರುವ FIR ಹಿಂಪಡೆಯದೆ ಹೋದರ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್ .ಕೆ ಎಚ್ಚರಿಸಿದ್ದಾರೆ.

See also  ಮಂಗಳೂರು: ಹುಲಿ ಕುಣಿತದ ವೇಳೆ ಆಯತಪ್ಪಿಬಿದ್ದ ಹುಲಿವೇಷಧಾರಿ..! ಮಂಗಳಾದೇವಿ ವಠಾರದಲ್ಲಿ ನಡೆಯಿತೇ ಅನಾಹುತ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget