Latestಕರಾವಳಿಕ್ರೈಂ

ಸುಳ್ಯ:ಫೇಸ್‌ ಬುಕ್ ಜಾಹಿರಾತು ನೋಡಿ ಹಣ ಹೂಡಿಕೆ ಮಾಡಲು ಹೊರಟ ಶಿಕ್ಷಕ!ಅಪರಿಚಿತ ವ್ಯಕ್ತಿಯಿಂದ 5 ಲಕ್ಷ ರೂ. ವಂಚನೆ,ದೂರು ದಾಖಲು

1.5k

ನ್ಯೂಸ್‌ ನಾಟೌಟ್:   ಅಪರಿಚಿತನೊಬ್ಬ ಶಿಕ್ಷಕರೊಬ್ಬರಿಗೆ ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರ ಬಗ್ಗೆ ವರದಿಯಾಗಿದೆ. ಸುಳ್ಯದ ಅಮರ ಪಡ್ನೂರು ಗ್ರಾಮದ ನಿವಾಸಿ, 46 ವರ್ಷದ ಶಿಕ್ಷಕ ವಂಚನೆಗೊಳಗಾದವರು ಎಂದು ತಿಳಿದು ಬಂದಿದೆ.

ಏನಿದು ಘಟನೆ?

ಅಪರಿಚತ ವ್ಯಕ್ತಿಯೋರ್ವ ಬಂದು ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚುವರಿ ಹಣ ನೀಡುವುದಾಗಿ ತಿಳಿಸಿ ಶಿಕ್ಷಕರನ್ನು ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ದೂರುದಾರರು ಮಾ.7ರಂದು ಫೇಸ್‌ಬುಕ್‌ನಲ್ಲಿ 21,000 ಹಾಕಿ 28 ದಿನದಲ್ಲಿ 1,700,000 ಪಡೆಯಿರಿ ಎಂಬ ಜಾಹೀರಾತು ಬಂದಿದ್ದನ್ನು ನೋಡಿದ್ದಾರೆ. ಅದರಲ್ಲಿ ರಿಜಿಸ್ಟರ್‌ಆಗಲು ಮೊಬೈಲ್‌ ನಂಬ್ರ ಮತ್ತು ಇ ಮೇಲ್‌ ವಿಳಾಸ ನೀಡಿದ್ದರು. ಅನಂತರ ದೂರುದಾರರಿಗೆ ಕರೆ ಮಾಡಿ ಜಿಎಂಝಡ್ ಗ್ಲೋಬಲ್‌ ಟ್ರೇಡಿಂಗ್ ಪ್ಲಾಟ್‌ ಫಾರ್ಮ್ನಲ್ಲಿ ಖಾತೆ ತೆರೆಯಲು ಹೇಳಿ ಲಾಗಿನ್‌ ಐಡಿ, ಪಾಸ್‌ವರ್ಡ್‌ ನೀಡಲಾಗಿತ್ತು.

ಬಳಿಕ ಅನಂತರ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಒಟ್ಟು 5,03,775.11 ರೂ. ಅನ್ನು ವಿವಿಧ ರೀತಿಯಲ್ಲಿ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಬಳಿಕ ಆ ಹಣವನ್ನು ಹಿಂಪಡೆಯಲು ನೋಡಿದಾಗ ಇನ್ನೂ ಹೆಚ್ಚಿನ ಹಣ ಹಾಕುವಂತೆ ತಿಳಿಸಲಾಗಿತ್ತು. ಆಗ ಶಿಕ್ಷಕರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

See also  ಪುತ್ತೂರು: KSRTC ಬಸ್‌ನಲ್ಲಿ ವಿವಾಹಿತ ಮಹಿಳೆಯ ಸೊಂಟಕ್ಕೆ ಕೈ ಹಾಕಿದ ವೃದ್ಧ..! ಕೆಮ್ಮಿಂಜೆ ಗ್ರಾಮದ ವ್ಯಕ್ತಿ ಅರೆಸ್ಟ್ , ಜಾಮೀನು ಮೇಲೆ ಬಿಡುಗಡೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget