ನ್ಯೂಸ್ ನಾಟೌಟ್: ಕರುನಾಡಿನ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದ ಕೋತಿರಾಜ್ ಪ್ರಥಮ ಬಾರಿಗೆ ದ.ಕ.ಜಿಲ್ಲೆಯ ಬಂಟ್ವಾಳಕ್ಕೆ ಆಗಮಿಸಿ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸ ಮಾಡಲಿದ್ದಾರೆ. ಮಾ.23(ನಾಳೆ) ಆದಿತ್ಯವಾರ ಬಂಡೆ ಏರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.
ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ ವೊಂದನ್ನು ನಡೆಸುತ್ತಿರುವ ಕೋತಿರಾಜ್, ಇವರಿಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಆರ್ಥಿಕ ಸಹಾಯ ಧನದ ಅವಶ್ಯಕತೆ ಇದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳದ ಪುರಾಣ ಪ್ರಸಿದ್ಧ ದೇವಾಲಯದ ಬೆಟ್ಟವನ್ನೇರಲು ಸಿದ್ದತೆ ನಡೆಸಿದ್ದಾರೆ.ದೇವಸ್ಥಾನ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಈ ಬಗ್ಗೆ ಅಧಿಕೃತವಾಗಿ ಪತ್ರವನ್ನು ನೀಡಿದ ಅವರು ಬೆಳ್ತಂಗಡಿ ಬಂಟ್ವಾಳ ತಾಲೂಕಿನ ಜನರ ಸಹಕಾರವನ್ನು ಕೂಡ ಈ ಸಂದರ್ಭದಲ್ಲಿ ಯಾಚಿಸಿದ್ದಾರೆ.ಈ ಕುತೂಹಲ ದೃಶ್ಯವನ್ನು ನೋಡಲು ಈ ಊರಿನ ಜನ ಕಾಯುತ್ತಿದ್ದಾರೆ.