ಕರಾವಳಿ

ಡ್ಯಾಂ ಬಳಿ ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ನೀರಿಗೆ ಆಯತಪ್ಪಿ ಬಿದ್ದ ಯುವಕ..!ಸತತ 2 ಗಂಟೆಗಳ ಕಾಲ ಈಜಾಡಿ ಪವಾಡ ಸದೃಶ ಪಾರಾದ..!ಅಷ್ಟಕ್ಕೂ ಡ್ಯಾಂನಿಂದ ನೀರು ರಭಸವಾಗಿ ಹರಿಯುತ್ತಿದ್ದರೂ ಈತ ಬಚಾವಾಗಿದ್ದೇಗೆ?

184

ನ್ಯೂಸ್ ನಾಟೌಟ್ :ಯುವಕನೋರ್ವ ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ನೀರಿಗೆ ಆಯತಪ್ಪಿ ಬಿದ್ದು, ಕೊನೆಗೂ ಜೀವ ಸಹಿತ ಪಾರಾದ ಘಟನೆ ಬಂಟ್ವಾಳದಿಂದ ವರದಿಯಾಗಿದೆ.ತುಂಬೆ ಡ್ಯಾಂ ಬಳಿ ಈ ಘಟನೆ ನಡೆದಿದ್ದು,ಯುವಕ ಸತತ 2 ಗಂಟೆಗಳ ಕಾಲ ಈಜಾಡಿ ತನ್ನ ಜೀವವನ್ನು ಕಾಪಾಡಿಕೊಂಡಿದ್ದಾನೆ..!

ಡ್ಯಾಂನಿಂದ ಹೊರಕ್ಕೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಯುವಕ ಸಿಲುಕಿದ್ದ. ಕೊನೆಗೆ ಈತನನ್ನು ಗಮನಿಸಿದ ಡ್ಯಾಂ ಸಿಬ್ಬಂದಿ ಕೂಡಲೇ ಕಾರ್ಯ ಪ್ರವೃತ್ತರಾದರು.ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರ ಕಾರ್ಯಾಚರಣೆ ನೆರವಿನಿಂದ ಆತ ಬಚಾವಾಗಿದ್ದಾನೆ. ಡ್ಯಾಂನ 30 ಗೇಟ್‌ಗಳ ಪೈಕಿ 5 ಗೇಟ್‌ಗಳಿಂದ ನೀರು ಹೊರಕ್ಕೆ ಹೋಗುತ್ತಿತ್ತು.ಹೀಗಿದ್ದರೂ ನೀರಿನ ರಭಸ ಹೆಚ್ಚಾಗಿದ್ದರೂ ಯುವಕ ಪಾರಾಗಿದ್ದೇ ಪವಾಡವೆಂದೇ ಹೇಳಬಹುದು.ನೀರಿಗೆ ಬಿದ್ದಿರುವ ಯುವಕನಿಗೆ ಈಜು ಬಂದಿದ್ದ ಕಾರಣ ಆತನನ್ನು ಬದುಕುಳಿಸಲು ಅಗ್ನಿಶಾಮಕದಳದವರಿಗೂ ಸಹಾಯಕವಾಯಿತು. ಯುವಕನನ್ನು ಬೋಳಂತೂರು ಭಾಗದ ಇರ್ಷಾದ್‌ ಎಂದು ಗುರುತಿಸಲಾಗಿದೆ.

ನೀರು ರಭಸದಿಂದ ಹರಿಯುತ್ತಿದ್ದ ಕಾರಣ ಆತನಿಗೆ ಮೇಲಕ್ಕೆ ಬರಲು ಸಾಧ್ಯವಾಗಿರಲಿಲ್ಲ.ರಾತ್ರಿ ಹೊತ್ತಿನಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ಆತ ಸುಮಾರು 8 ಗಂಟೆಗೆ ನೀರಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಈ ವೇಳೆ ಡ್ಯಾಂ ಸಿಬ್ಬಂದಿಗೆ ಎಲ್ಲಿಂದಲೋ ಬೊಬ್ಬೆ ಕೇಳಿ ಬಂದಿದೆ. ಹೋಗಿ ನೋಡಿದಾಗ ವ್ಯಕ್ತಿಯೋರ್ವ ನೀರಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂತು.

ಕೂಡಲೇ ಡ್ಯಾಂ ಸಿಬ್ಬಂದಿ ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಎಲ್ಲರೂ ಸೇರಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

See also  ಕೊಡಗಿನಲ್ಲಿ ಚಿದಂಬರಂ ಪುತ್ರ ಕಾರ್ತಿಗೆ ಸೇರಿದ ಆಸ್ತಿ ಜಪ್ತಿ‌ ಮಾಡಿದ ಇ.ಡಿ,ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಜಾಡು ಹಿಡಿದು ಕೊಡಗಿಗೆ ಆಗಮಿಸಿದ್ದ ಅಧಿಕಾರಿಗಳು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget