ನ್ಯೂಸ್ ನಾಟೌಟ್: ಎಮ್ಮೆ ಸ್ನಾನ ಮಾಡಿಸಲು ನದಿ ತೀರಕ್ಕೆ ಹೋದ ಬಾಲಕನನ್ನು ಮೊಸೆಳೆ ಎಳೆದೊಯ್ದ ಘಟನೆಯ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಭಾನುವಾರ(ಜೂ.22) ಈ ಘಟನೆ ನಡೆದಿದೆ. ರಾಜಾ ಬಾಬು ಅಲಿಯಾಸ್ ನ್ಯಾನ್ ಯಾದವ್ ನಾಪತ್ತೆಯಾಗಿರುವ ಬಾಲಕ ಎಂದು ಗುರುತಿಸಲಾಗಿದೆ.
ರಾಜಾ ಬಾಬು ತನ್ನ ಎಮ್ಮೆಗಳನ್ನು ಸ್ನಾನ ಮಾಡಿಸಲು ನದಿಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ನದಿ ತೀರದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಬಾಲಕನನ್ನು ಘಾಗ್ರಾ ನದಿಗೆ ಎಳೆದುಕೊಂಡು ಹೋಗಿದೆ.
ಮೊಬೈಲ್ ನಲ್ಲಿ ಈ ಆಘಾತಕಾರಿ ಘಟನೆಯ ವಿಡಿಯೋ ಸೆರೆಯಾಗಿದ್ದು, ಮೊಸಳೆ ಹಾಗೂ ಬಾಲಕನ ತಲೆ ವಿಡಿಯೋದಲ್ಲಿ ಕಾಣಿಸುತ್ತದೆ.
ಮೊಸಳೆ ನದಿ ಆಳಕ್ಕೆ ಹೋದ ಬಳಿಕ ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ ಬಾಲಕನ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಆದರೆ ಗಂಟೆಗಟ್ಟಲೇ ಹುಡುಕಿದರೂ ಬಾಲಕ ಪತ್ತೆಯಾಗಿಲ್ಲವೆಂದು ವರದಿ ತಿಳಿಸಿದೆ.
उत्तर प्रदेश –
जिला गोंडा में घाघरा नदी किनारे भैंस नहलाने गए 13 वर्षीय राजा बाबू उर्फ नान यादव को मगरमच्छ खींचकर ले गया। एक Video में मगरमच्छ और बच्चे का सिर मामूली दिखता है। फिर दोनों लापता हो जाते हैं। कल से तलाश जारी है। pic.twitter.com/Bqi3RzXAJo
— Sachin Gupta (@SachinGuptaUP) June 23, 2025
ಸದ್ಯ ಮೊಸಳೆ ಬಾಲಕನನ್ನು ಎಳೆದೊಯ್ದ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಮೂಡಿಸಿದೆ.
ಇರಾನ್ ಗೆ ದಾಳಿ ಮಾಡಲು ಭಾರತದ ವಾಯುಸೀಮೆಯನ್ನು ಬಳಸಿತ್ತಾ ಅಮೆರಿಕ..? ಇಲ್ಲಿದೆ ಸಂಪೂರ್ಣ ಮಾಹಿತಿ