Latestಕ್ರೈಂವಿಡಿಯೋವೈರಲ್ ನ್ಯೂಸ್

ಎಮ್ಮೆ ಸ್ನಾನ ಮಾಡಿಸಲು ನದಿಗಿಳಿದ ಬಾಲಕನನ್ನು ಎಳೆದೊಯ್ದ ಮೊಸಳೆ..! ವಿಡಿಯೋ ವೈರಲ್

23

ನ್ಯೂಸ್ ನಾಟೌಟ್: ಎಮ್ಮೆ ಸ್ನಾನ ಮಾಡಿಸಲು ನದಿ ತೀರಕ್ಕೆ ಹೋದ ಬಾಲಕನನ್ನು ಮೊಸೆಳೆ ಎಳೆದೊಯ್ದ ಘಟನೆಯ ವಿಡಿಯೋ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಭಾನುವಾರ(ಜೂ.22) ಈ ಘಟನೆ ನಡೆದಿದೆ. ರಾಜಾ ಬಾಬು ಅಲಿಯಾಸ್ ನ್ಯಾನ್ ಯಾದವ್ ನಾಪತ್ತೆಯಾಗಿರುವ ಬಾಲಕ ಎಂದು ಗುರುತಿಸಲಾಗಿದೆ.
ರಾಜಾ ಬಾಬು ತನ್ನ ಎಮ್ಮೆಗಳನ್ನು ಸ್ನಾನ ಮಾಡಿಸಲು ನದಿಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ನದಿ ತೀರದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಬಾಲಕನನ್ನು ಘಾಗ್ರಾ ನದಿಗೆ ಎಳೆದುಕೊಂಡು ಹೋಗಿದೆ.

ಮೊಬೈಲ್‌ ನಲ್ಲಿ ಈ ಆಘಾತಕಾರಿ ಘಟನೆಯ ವಿಡಿಯೋ ಸೆರೆಯಾಗಿದ್ದು, ಮೊಸಳೆ ಹಾಗೂ ಬಾಲಕನ ತಲೆ ವಿಡಿಯೋದಲ್ಲಿ ಕಾಣಿಸುತ್ತದೆ.
ಮೊಸಳೆ ನದಿ ಆಳಕ್ಕೆ ಹೋದ ಬಳಿಕ ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ ಬಾಲಕನ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಆದರೆ ಗಂಟೆಗಟ್ಟಲೇ ಹುಡುಕಿದರೂ ಬಾಲಕ ಪತ್ತೆಯಾಗಿಲ್ಲವೆಂದು ವರದಿ ತಿಳಿಸಿದೆ.

ಸದ್ಯ ಮೊಸಳೆ ಬಾಲಕನನ್ನು ಎಳೆದೊಯ್ದ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಮೂಡಿಸಿದೆ.

ಇಲ್ಲೇ ಇರು ಬರುತ್ತೇನೆಂದು ವೃದ್ಧೆ ತಾಯಿಯನ್ನು ರಸ್ತೆ ಬದಿಯಲ್ಲಿ ಬಿಟ್ಟು ಮಗ ಪರಾರಿ..! ಆಹಾರ ನೀಡಿ ಸಲಹಿದ ಸ್ಥಳೀಯರು..!

ಇರಾನ್ ಗೆ ದಾಳಿ ಮಾಡಲು ಭಾರತದ ವಾಯುಸೀಮೆಯನ್ನು ಬಳಸಿತ್ತಾ ಅಮೆರಿಕ..? ಇಲ್ಲಿದೆ ಸಂಪೂರ್ಣ ಮಾಹಿತಿ

See also  ಹಾಲು ತರುತ್ತಿದ್ದ ಪುಟ್ಟ ಬಾಲಕಿ ಮೇಲೆ 60ರ ಅಜ್ಜನಿಂದ ಅತ್ಯಾಚಾರ..! 13 ರ ಬಾಲಕಿ ಈಗ ಗರ್ಭಿಣಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget