ಕ್ರೈಂವೈರಲ್ ನ್ಯೂಸ್

ರಾತ್ರೋರಾತ್ರಿ ಪುತ್ತೂರಿನಲ್ಲಿ ಕಾಡಾನೆ ದಾಳಿ..! ಅಪಾರ ಬೆಳೆ ನಾಶ ಮಾಡಿದ್ದೆಲ್ಲಿ..? ಸ್ಥಳೀಯರಲ್ಲಿ ಆತಂಕ!

179

ನ್ಯೂಸ್ ನಾಟೌಟ್ : ಇತ್ತೀಚೆಗೆ ಕಾಡಾನೆ ದಾಳಿಗಳು ಮತ್ತು ಉಪಟಳಗಳು ಹೆಚ್ಚಾಗಿದ್ದು, ನಿನ್ನೆ(ಡಿ.೨೦)ರ ರಾತ್ರಿ ಪುತ್ತೂರಿನ ಕೃಷಿತೋಟಕ್ಕೆ ದಾಳಿ ಮಾಡಿ ಅಪಾರ ಬೆಳೆ ಹಾನಿ ಮಾಡಿದ ಘಟನೆ ನಡೆದಿದೆ.

ಇತ್ತೀಚೆಗೆ ಹಾಸನದಲ್ಲಿ ಕಾಡಾನೆ ಸೆರೆಹಿಡಿಯುವ ವೇಳೆ ನಡೆದ ಅಚಾತುರ್ಯದಿಂದ ೮ ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನನ್ನು ಕಳೆದುಕೊಳ್ಳಬೇಕಾಯಿತು.
ಈಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಕೃಷಿತೋಟಕ್ಕೆ ದಾಳಿ ಮಾಡಿದ ಕಾಡಾನೆ ವರದಿಯಾಗಿದೆ.

ತೋಟಕ್ಕೆ ನುಗ್ಗಿ ಅಡಿಕೆ,ಬಾಳೆ,ತೆಂಗು ಗಿಡಗಳನ್ನು ನಾಶ ಮಾಡಿದ ಕಾಡಾನೆ ಅಪಾರ ಬೆಳೆ ನಾಶ ಮಾಡಿದೆ.
ಪುತ್ತೂರಿನ ಪೆರ್ನಾಜೆ ಎಂಬಲ್ಲಿ ಆನೆ ಪತ್ತೆಯಾದ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಪುತ್ತೂರಿನ ಈ ಭಾಗದಲ್ಲಿ ಈ ಭಾಗಕ್ಕೆ ದಾಳಿ ನಡೆಸಿರುವ ಕಾಡಾನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳೆ ಪರಿಹಾರಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.

See also  ಉಪ್ಪಿನಂಗಡಿ:ತಡರಾತ್ರಿ ಹೊತ್ತಿ ಉರಿದ ಬೇಕರಿ ಅಂಗಡಿ..! ಬೆಳ್ತಂಗಡಿ ಮತ್ತು ಪುತ್ತೂರಿನಿಂದ ಬಂದ ಅಗ್ನಿಶಾಮಕ ವಾಹನಗಳು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget