ಕೆವಿಜಿ ಕ್ಯಾಂಪಸ್‌ಶಿಕ್ಷಣಸುಳ್ಯ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ, ವಿಶೇಷ ಜಾಗೃತಿ ಕಾರ್ಯಕ್ರಮ

184

ನ್ಯೂಸ್ ನಾಟೌಟ್ :ಭಾರತದಲ್ಲಿ ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ವಿಭಾಗ ಹಾಗೂ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಸಹಯೋಗದೊಂದಿಗೆ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಜ. 23 ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಂದಿರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು.

ಮಕ್ಕಳ ವಿಭಾಗದ ಪ್ರೊಫೆಸರ್ ಡಾ.ಸುಧಾ ರುದ್ರಪ್ಪ ಮಾತನಾಡಿ, ಸಮಾಜದಲ್ಲಿ ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ 2008 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರವು ಜಾರಿಗೆ ತಂದಿತು ಎಂದು ಕಾರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿದರು. ಬಳಿಕ ಮಾತನಾಡಿದ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ ಗೀತಾ ದೊಪ್ಪ ಮಾತನಾಡಿ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹೆಣ್ಣು ಮಕ್ಕಳನ್ನು ಗೌರವಿಸಲು ಮತ್ತು ಪ್ರಶಂಸಿಸಲು ಪ್ರಬಲ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಹುಡುಗಿಯೂ ಪ್ರೀತಿ, ಗೌರವ ಮತ್ತು ಮನ್ನಣೆಗೆ ಅರ್ಹಳು. ಪ್ರತಿ ಹೆಣ್ಣು ಮಗಳನ್ನು ಪ್ರೀತಿ ಕಾಳಜಿಯಿಂದ ಪಾಲಿಸಬೇಕು. ಹೆಣ್ಣು ಗಂಡು ಎಂಬ ಅಸಮಾನತೆಯನ್ನು ತೊಡೆದು ಹಾಕಬೇಕು. ಪ್ರತಿ ಹೆಣ್ಣು ಮಗುವಿಗೆ ಉತ್ತಮ ವಿದ್ಯಾಭ್ಯಾಸದೊಂದಿಗೆ ಸಾಮಾಜಿಕ ಸ್ಥಾನ ಮಾನ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸುಳ್ಯದ ಅಧ್ಯಕ್ಷರಾದ ಡಾ.ವೀಣಾ ಮಾತನಾಡಿ, ಅನೇಕ ಸಂಸ್ಕೃತಿಗಳು ಐತಿಹಾಸಿಕವಾಗಿ ಪಿತೃಪ್ರಭುತ್ವವನ್ನು ಹೊಂದಿವೆ, ಇದು ಪುತ್ರರಿಗೆ ಹೋಲಿಸಿದರೆ ಹೆಣ್ಣುಮಕ್ಕಳನ್ನು ಕಡಿಮೆ ಮೌಲ್ಯಮಾಪನ ಮಾಡಲು ಕಾರಣವಾಗುತ್ತದೆ. ಭಾರತದಲ್ಲಿ, ಈ ಅಸಮಾನತೆಯು ಗಮನಿಸಿ ಈ ನಿಟ್ಟಿನಲ್ಲಿ ನಾವೆಲ್ಲರೂ ಬದಲಾಗಬೇಕಿದೆ ಎಂದು ಕರೆ ನೀಡಿದರು.

ಈ ಕಾರ್ಯಕ್ರಮದ ಕುರಿತು ಒ.ಬಿ.ಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಹಸ್ರಿನ ಫಾತಿಮಾ, ಮಕ್ಕಳ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಡಾ ಸಪ್ತಮಿ ಕಾರ್ಯಕ್ರಮದ ಕುರಿತಾಗಿ ಮಾತನಾಡಿ ಜಾಗೃತಿ ಮೂಡಿಸಿದರು. ಈ ಸಂದರ್ಭ ಒ. ಬಿ. ಜಿ ವಿಭಾಗದ ಯುನಿಟ್ ಹೆಡ್ ಹಾಗೂ ಪ್ರಾಧ್ಯಾಪಕರಾದ ಡಾ ರವಿಕಾಂತ್ ಜಿ ಒ, ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಗೌರವ್, ಡಾ ಸುನೀತಾ ಉಪಸ್ಥಿತರಿದ್ದರು. ಒ.ಬಿ.ಜಿ ವಿಭಾಗದ ಪ್ರಾಧ್ಯಾಪಕರಾದ ಡಾ ಭವ್ಯ ಸ್ವಾಗತಿಸಿದರು. ಡಾ ಸುನೀತಾ ವಂದಿಸಿ, ಡಾ ಜಾನ್ವಿ ಕಾರ್ಯಕ್ರಮ ನಿರೂಪಿಸಿದರು.

Click

https://newsnotout.com/2025/01/17-year-old-boy-misused-by-women-kannada-news-d/
https://newsnotout.com/2025/01/begaluru-express-kannada-news-12-people-nomore-d/
https://newsnotout.com/2025/01/mangaluru-bank-robbery-kannada-news-bharath-shetty/
https://newsnotout.com/2025/01/bihar-kannada-news-coplicated-case-body-thief/
https://newsnotout.com/2025/01/mount-everest-cost-of-climbing-for-foriegn-tourist-will-high/
https://newsnotout.com/2025/01/man-try-to-attack-police-and-cought-fired-and-hospitalized/
https://newsnotout.com/2025/01/yodh-kannada-news-viral-video-virat-kohli/
See also  ಬಹುನಿರೀಕ್ಷಿತ ಅರಂತೋಡು-ಎಲಿಮಲೆ ರಸ್ತೆ ಅಭಿವೃದ್ದಿಗೆ ಗುದ್ದಲಿಪೂಜೆ,ಒಂದು ವಾರದೊಳಗೆ 3 ಕೋಟಿ ವೆಚ್ಚದಲ್ಲಿ ಕಾಮಗಾರಿ ಶುರು
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget