ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ವರನ ಕತ್ತಲ್ಲಿದ್ದ ನೋಟಿನ ಮಾಲೆಯಿಂದ ನೋಟು ಎಗರಿಸಿದ ಕಳ್ಳ..! ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ಮದುಮಗ..! ಇಲ್ಲಿದೆ ವೈರಲ್ ವಿಡಿಯೋ

160

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಮೀರತ್‌ ನ ದಂಗರ್‌ ವಾಲಿಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ಸಂಭ್ರಮದ ಖುಷಿಯಲ್ಲಿದ್ದ ವರ ಖುಷಿ ಖುಷಿಯಾಗಿ ಕುದುರೆ ಏರಿ ಕೊರಳಿಗೆ ಹಣದ ನೋಟಿನ ಹಾರ ಹಾಕಿಕೊಂಡು ದೇವಸ್ಥಾನದ ಕಡೆಗೆ ಮೆರವಣಿಗೆಯಲ್ಲಿ ಬರುತ್ತಿದ್ದರೆ ಇತ್ತ ವ್ಯಕ್ತಿಯೋರ್ವ ವರನ ಕತ್ತಿನಲ್ಲಿದ್ದ ನೋಟಿನ ಹಾರದಲ್ಲಿ ಒಂದು ನೋಟನ್ನು ಎಗರಿಸಿ ಪರಾರಿಯಾದ ಘಟನೆ ಕಳೆದ ಶನಿವಾರ(ನ.23) ರಂದು ನಡೆದಿದೆ. ಇತ್ತ ಕಳ್ಳ ನೋಟು ಕಿತ್ತು ಪರಾರಿಯಾಗುತ್ತಿದ್ದಂತೆ ಮದುವೆ ಹಾಲ್ ಗೆ ಹೋಗಬೇಕಾದ ವರ ಕಳ್ಳನ ಹಿಂದೆ ಓಡಿದ್ದಾನೆ.

ಶನಿವಾರ ಉತ್ತರ ಪ್ರದೇಶದ ಮೀರತ್‌ನ ದಂಗರ್‌ವಾಲಿಯಲ್ಲಿ ಮದುವೆ ಆಗಬೇಕಿದ್ದ ವರ ತನ್ನ ಕುಟುಂಬ ಸದಸ್ಯರ ಜೊತೆ ಕುದುರೆ ಏರಿ ದೇವಸ್ಥಾನದತ್ತ ಬರುತ್ತಿದ್ದ ಇನ್ನೇನು ದೇವಸ್ಥಾನ ಬಂತು ಎಂದು ಕುದುರೆಯಿಂದ ಇಳಿದು ದೇವಸ್ಥಾನಕ್ಕೆ ತೆರಳಬೇಕು ಎನ್ನುವಷ್ಟರಲ್ಲಿ ಅದೆಲ್ಲಿದ್ದನೋ ಗೊತ್ತಿಲ್ಲ ವ್ಯಕ್ತಿಯೋರ್ವ ವರ ಬಳಿ ತೆರಳಿ ಆತನ ಕತ್ತಿನಲ್ಲಿದ್ದ ನೋಟಿನ ಮಾಲೆಯಿಂದ ಒಂದು ನೋಟನ್ನು ಎಗರಿಸಿ ಓಡಿದ್ದಾನೆ, ಇದರಿಂದ ಸಿಟ್ಟಿಗೆದ್ದ ವರ ಸಿನಿಮಾ ಶೈಲಿಯಂತೆ ಆತನನ್ನು ಹಿಂಬಾಲಿಸಲು ಶುರು ಮಾಡಿದ್ದಾನೆ. ಅಷ್ಟೋತ್ತಿಗಾಗಲೇ ಕಳ್ಳ ಅಲ್ಲಿದ್ದ ಗೂಡ್ಸ್ ವಾಹನ ಏರಿ ಹೊರಟಿದ್ದಾನೆ.

ಅಷ್ಟಕ್ಕೆ ಬಿಡದ ವರ ಓಡಿ ಹೋಗಿ ಗೂಡ್ಸ್ ವಾಹನದ ಹಿಂಬದಿಯಿಂದ ವಾಹನವನ್ನು ಹತ್ತಿದ್ದಾನೆ. ಬಳಿಕ ವಾಹನ ಚಲಿಸುತ್ತಿದ್ದಂತೆ ಎಡಭಾಗದಲ್ಲಿ ವಾಹನದ ಕಿಟಕಿಯ ಮೂಲಕ ವಾಹನದೊಳಗೆ ಪ್ರವೇಶಿಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಾಡಿಯನ್ನು ನಿಲ್ಲಿಸಿ ಓಡಲೆತ್ನಿಸಿದ ಚಾಲಕನನ್ನು ಹಿಡಿದು ಹಾಕಿ ಗೂಸಾ ನೀಡಿದ್ದಾನೆ, ಈ ವೇಳೆ ವರನ ಕಡೆಯವರೂ ಅಲ್ಲಿಗೆ ಬಂದಿದ್ದು ಅವರೂ ನಡುರಸ್ತೆಯಲ್ಲೇ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಕಳ್ಳ ತನ್ನ ತಪ್ಪನ್ನು ಒಪ್ಪಿಕೊಂಡ ಬಳಿಕ ಆತನನ್ನು ಬಿಟ್ಟು ಮದುವೆ ಹಾಲ್ ಗೆ ಬಂದು ಮದುವೆ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದಾನೆ ಎನ್ನಲಾಗಿದೆ.

Click

https://newsnotout.com/2024/11/ipl-kannada-news-rishab-panth-kannada-news-viral-issue-ipl-bidding/
https://newsnotout.com/2024/11/kannada-news-business-man-and-live-in-relationship-issue/
https://newsnotout.com/2024/11/mysore-chamundeshwari-gold-ratha-kannada-news/
https://newsnotout.com/2024/11/kollur-kantara-kannada-news-mini-bus-viral-news-kdd/
https://newsnotout.com/2024/11/swiggi-kannada-news-office-viral-news-viral-post-office/
https://newsnotout.com/2024/11/google-map-kannada-news-marriage-map-kannada-news-marriage/
See also  Kerala election result: ಕೊಯಮತ್ತೂರಿನಲ್ಲಿ 'ಸಿಂಗಂ' ಅಣ್ಣಾಮಲೈಗೆ ಸೋಲು, ಕೇರಳದಲ್ಲಿ ಖಾತೆ ತೆರೆದು ಇತಿಹಾಸ ಸೃಷ್ಟಿಸಿದ ಬಿಜೆಪಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget