ಕ್ರೈಂರಾಜಕೀಯವೈರಲ್ ನ್ಯೂಸ್

ನನ್ನ ಸಹಿಯನ್ನೇ ತಿರುಚಿ, ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ ಎಂದ ಹೆಚ್.ಡಿ.ಕೆ..! ಒಂದು ದಿನವಾದ್ರೂ ನನ್ನನ್ನು ಜೈಲಿಗೆ ಹಾಕುವ ಪ್ಲ್ಯಾನ್‌ ಎಂದ ಕುಮಾರಸ್ವಾಮಿ..!

170

ನ್ಯೂಸ್ ನಾಟೌಟ್: ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದಕ್ಕೆ ಸಿದ್ದರಾಮಯ್ಯ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಒಂದು ದಿನವಾದರೂ ಜೈಲಿಗೆ ಹಾಕಿಸಬೇಕು ಅಂತ ನನ್ನ ಸಹಿ ತಿರುಚಿರುವ ದಾಖಲಾತಿಗಳನ್ನ ಇಟ್ಟುಕೊಂಡು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸಾಯಿ ವೆಂಕಟೇಶ್ವರ ಮೈನಿಂಗ್ ಪ್ರಕರಣದಲ್ಲಿ ತನ್ನ ವಿರುದ್ಧ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೇಳಿದ್ದಕ್ಕೆ ಹೆಚ್‌ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.

ಸಾಯಿ ವೆಂಕಟೇಶ್ವರ ಮಿನರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) 2017 ರಲ್ಲಿ 3 ತಿಂಗಳ ಒಳಗೆ ಎಸ್‌ಐಟಿ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಆದರೆ ಈ ಸರ್ಕಾರ 2024 ಆದರೂ ಸುಪ್ರೀಂಗೆ ತನಿಖಾ ವರದಿ ಸಲ್ಲಿಕೆ ಮಾಡಿಲ್ಲ. ಅದನ್ನು ಬಿಟ್ಟು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿ ಎಂದು ಎಸ್‌ಐಟಿ ಮೂಲಕ ಪತ್ರ ಬರೆಸಿ ಹೇಗಾದರೂ ಮಾಡಿ ನನ್ನನ್ನ ಸಿಲುಕಿಸಬೇಕು ಎಂದು ಪ್ಲ್ಯಾನ್‌ ಮಾಡಿದೆ ಎಂದು ಆರೋಪಿಸಿದರು.
2017 ರಿಂದಲೂ ನನ್ನನ್ನ ಜೈಲಿಗೆ ಹಾಕಿಸಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

Click

https://newsnotout.com/2024/08/fir-on-protested-perents-kannada-news-school-students-issue/
https://newsnotout.com/2024/08/serial-ki-kannada-news-kkenya-42-womens-are-suspence-nomore-j/
https://newsnotout.com/2024/08/baby-bites-snake-kannada-news-and-doctor-reveals-fact/
https://newsnotout.com/2024/08/bantwal-netravathi-river-issue-kannada-news-body-found/
https://newsnotout.com/2024/08/hijra-case-boy-suspence-issue-at-bengaluru-kannada-news-police/
https://newsnotout.com/2024/08/cm-siddaramayya-muda-case-and-his-wife-wrote-a-latter-t/
See also  2 ವರ್ಷದ ಪ್ರೀತಿ 2 ನಿಮಿಷದಲ್ಲಿ ದುರಂತ ಅಂತ್ಯ..! ಯುವತಿಯನ್ನು ಕೊಂದು ಮಣ್ಣಲ್ಲಿ ಹೂತಿಟ್ಟ ಯುವಕ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget