Latestಕ್ರೈಂವೈರಲ್ ನ್ಯೂಸ್

ಕೊಳಚೆ ಚರಂಡಿ ಸ್ವಚ್ಛಗೊಳಿಸಿದ ಶಾಲಾ ವಿದ್ಯಾರ್ಥಿಗಳು..! ಮುಖ್ಯಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ, ಇಲ್ಲಿದೆ ವಿಡಿಯೋ

672

ನ್ಯೂಸ್ ನಾಟೌಟ್: ಮುಖ್ಯಶಿಕ್ಷಕನೊರ್ವ ಶಾಲೆಯ ಮಕ್ಕಳಿಂದ ಕೊಳಚೆ ಬೋರವೆಲ್ ಚರಂಡಿ ನೀರನ್ನು ಸ್ವಚ್ಚ ಮಾಡಿಸಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕಾಡಮಗೇರಾ (ಬಿ) ಪಂಚಾಯಿತಿಯ ವ್ಯಾಪ್ತಿಯ ಕ್ಯಾತನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಮುಖ್ಯಶಿಕ್ಷಕ ಶರಣಪ್ಪ ಬಾಗ್ಲಿ, ಶಾಲೆಯ ಮಕ್ಕಳಿಂದ ಚರಂಡಿ ಸ್ವಚ್ಛತೆಯನ್ನು ಸ್ವತಃ ಮುಂದೆ ನಿಂತು ಮಾಡಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಮುಖ್ಯ ಗುರುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿಕ್ಕೆ ಒತ್ತಾಯಿಸಿದ್ದಾರೆ ಮತ್ತು ದೂರು ನೀಡಲಾಗಿದೆ.

 

See also  ಸರ್ಕಾರಿ ಬಸ್ ನಲ್ಲೂ ಬಂತು ಕ್ಯೂಆರ್ ಸ್ಕ್ಯಾನರ್..! ಇನ್ನೂ ಸರ್ಕಾರಿ ಬಸ್ ಗಳಲ್ಲಿ ಕ್ಯಾಶ್ ಇಲ್ಲದೆಯೂ ಪ್ರಯಾಣಿಸ್ಬಹುದಾ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget