ನ್ಯೂಸ್ ನಾಟೌಟ್: ಚಲಿಸುತ್ತಿರುವಾಗಲೇ ರೈಲು ಇಬ್ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ಇಂದು(ಮಾ.4) ಮುಂಜಾನೆ ನಡೆದಿದೆ. ದೀನ್ ದಯಾಳ್ ಜಂಕ್ಷನ್ ಬಳಿ ಸಂಭವಿಸಬಹುದಾದ ದೊಡ್ಡ ಅಪಾಯವೊಂದು ತಪ್ಪಿದೆ.
ಜಂಕ್ಷನ್ನಿಂದ ಹೊರಟ ರೈಲು ಸ್ವಲ್ಪ ದೂರ ಹೋದ ನಂತರ ಎರಡು ಭಾಗಗಳಾಗಿ ವಿಭಜನೆಯಾಗಿದೆ. ಕಪ್ಲಿಂಗ್ ಮುರಿದುಹೋದ ಕಾರಣ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ರೈಲು ದೆಹಲಿಯ ಆನಂದ್ ವಿಹಾರ್ ನಿಂದ ಒಡಿಶಾದ ಪುರಿಗೆ ಹೋಗುತ್ತಿತ್ತು.
#WATCH | Chandauli, Uttar Pradesh: The coupling of the Nandan Kanan Express broke near the Pandit Deen Dayal Upadhyaya (DDU) Junction, splitting it into two parts. pic.twitter.com/QjqUHN7tfe
— ANI UP/Uttarakhand (@ANINewsUP) March 4, 2025
ಈ ಮಧ್ಯೆ, 12876 ನಂದನ್ ಕಾನನ್ ಎಕ್ಸ್ ಪ್ರೆಸ್ ರೈಲಿನ ಸ್ಲೀಪರ್ ಎಸ್ 4 ಬೋಗಿಯ ಜೋಡಣೆಯ ಕೊಂಡಿ ಮುರಿದು ಬಿದ್ದಿದೆ. ಜೋಡಣೆಯಲ್ಲಿ ಬಿರುಕು ಬಿಟ್ಟ ಕಾರಣ ರೈಲು ಎರಡು ಭಾಗವಾಗಿ ಬೋಗಿಗಳು ಬೇರ್ಪಟ್ಟಿವೆ. ಈ ಸಮಯದಲ್ಲಿ, ರೈಲಿನೊಳಗೆ ಕುಳಿತಿದ್ದ ಪ್ರಯಾಣಿಕರು ಆತಂಕಗೊಂಡಿದ್ದು, ರೈಲು ಆಗಷ್ಟೇ ಹೊರಡುತ್ತಿದ್ದ ಕಾರಣ ದೊಡ್ಡ ಅಪಾಯ ತಪ್ಪಿದೆ.