ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಆಟವಾಡುತ್ತಿದ್ದ ಮಕ್ಕಳ ಮೇಲೆ ಉರುಳಿ ಬಿದ್ದ ಬೃಹತ್ ಬಂಡೆ..! ಅಸಹಾಯಕರಾಗಿ ಕೂಗಾಡಿದ ಪೋಷಕರು..!

206

ನ್ಯೂಸ್ ನಾಟೌಟ್: ಬೃಹತ್ ಗಾತ್ರದ ಕಲ್ಲು ಬಂಡೆ ಉರುಳಿ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೌಡೂರು ತಾಂಡದಲ್ಲಿ ಇಂದು(ಅ.15)ನಡೆದಿದೆ.

ದುರಂತದಲ್ಲಿ ಮಂಜುನಾಥ, ವೈಶಾಲಿ ಎಂಬ 2 ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ರಘು(8) ಎಂಬ ಬಾಲಕನ ಕಾಲು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂವರು ವಿದ್ಯಾರ್ಥಿಗಳು ಮೂರನೇ ತರಗತಿಯಲ್ಲಿ ಓದುತ್ತಿರುವವರು. ದಸರಾ ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ಘೋಷಿಸಿರುವ ಹಿನ್ನೆಲೆ ಪೋಷಕರ ಜೊತೆಗೆ ಜಮೀನಿಗೆ ಬಂದಿದ್ದ ಮಕ್ಕಳು. ಜಮೀನು ಬದಿಯಲ್ಲಿ ಬೃಹತ್ ಬಂಡೆಗಳನ್ನು ಹಾಕಲಾಗಿತ್ತು. ಇದೇ ಕಲ್ಲು ಬಂಡೆಗಳ ಸುತ್ತ ಆಟವಾಡುತ್ತಿದ್ದ ವೇಳೆ ಬಂಡೆಕಲ್ಲು ಮಣ್ಣು ಕುಸಿದು ಮಕ್ಕಳ ಮೇಲೆ ಬಂದಿದೆ.

ಮಕ್ಕಳ ನರಳಾಟ ಕೇಳಿ ಪೋಷಕರು ಓಡಿ ಬಂದರೂ ತಕ್ಷಣ ಬೃಹತ್ ಕಲ್ಲು ಬಂಡೆಯನ್ನು ಎತ್ತಿಹಾಕಲು ಸಾಧ್ಯವಾಗದೆ ಅಸಹಾಯಕರಾಗಿದ್ದರು. ಕಣ್ಮುಂದೆ ಅಟವಾಡುತ್ತಿದ್ದ ಮಕ್ಕಳ ದಾರುಣ ಸಾವು ಕಂಡು ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರು ಸೇರಿ ಬಳಿಕ ಬಂಡೆ ಕಲ್ಲನ್ನು ಎತ್ತಿ ದೂರಕ್ಕೆ ಸರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Click

https://newsnotout.com/2024/10/darshan-thugudeepa-case-bail-issue-highcourt-appeal/
https://newsnotout.com/2024/10/dr-puneethrajkumar-kannada-news-sports-and-scam/
https://newsnotout.com/2024/10/covid-shield-kannada-news-supreme-court-viral-news/
https://newsnotout.com/2024/10/railway-rout-change-and-kannada-news-karnataka-d/
https://newsnotout.com/2024/10/school-teacher-attempt-to-harm-kannada-news-bengaluru/
https://newsnotout.com/2024/10/kannada-news-bengaluru-animal-kananda-news-m/
https://newsnotout.com/2024/10/coconut-tree-kannada-news-photo-viral-sayuktha-hegade/
See also  ನಾಪತ್ತೆಯಾಗಿದ್ದ ಮಾಜಿ ಸಚಿವನ ಶವ ಕಾಲುವೆಯಲ್ಲಿ ಪತ್ತೆ..! ಆ ಎರಡು ವಸ್ತುಗಳು ನೀಡಿದ ಸುಳಿವೇನು..?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget