ನ್ಯೂಸ್ ನಾಟೌಟ್: ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾರತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಚ್ಚರಿ ಅಂದ್ರೆ, ಅತುಲ್ ಸುಭಾಷ್, “ನ್ಯಾಯ ಇನ್ನೂ ಬಾಕಿ ಇದೆ” (JUSTICE IS DUE) ಎಂದು ಬೋರ್ಡ್ ತನ್ನ ಕುತ್ತಿಗೆ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ. ಅಲ್ಲದೇ 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಆ ಡೆತ್ನೋಟ್ ಗಳನ್ನು ಮಧ್ಯರಾತ್ರಿ NGO ವಾಟ್ಸಾಪ್ ಗ್ರೂಪ್ ಗೆ ಶೇರ್ ಮಾಡಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶ ಮೂಲದ ಅತುಲ್ ಸುಭಾಶ್ ಮಾರತಹಳ್ಳಿಯ ಲೇಔಟ್ನಲ್ಲಿ ವಾಸವಿದ್ದರು. ಈತನಿಗೆ ಮದುವೆಯಾಗಿದ್ದು, ಅತುಲ್ ಮೇಲೆ ಪತ್ನಿ ಉತ್ತರ ಪ್ರದೇಶದಲ್ಲಿ ಕೇಸ್ ಹಾಕಿದ್ದಳು. ಕೌಟುಂಬಿಕ ಕಲಹದಿಂದ ನೊಂದಿದ್ದ ಪತಿ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೆಂಡತಿ ಸುಳ್ಳು ಕೇಸ್ ಹಾಕಿದ್ರೆ ಹೋರಾಟ ಮಾಡುವ Save Indian family foundation ಎನ್ನುವ NGO ಕೂಡ ಸೇರಿದ್ದ. ಹೀಗಾಗಿ NGOದ ವಾಟ್ಸ್ಆ್ಯಪ್ ಗ್ರೂಪ್ಗೆ ಡೆತ್ ನೋಟ್ ಕಳಿಸಿದ್ದಾನೆ. ಅದರಲ್ಲಿ ಸಾಧ್ಯವಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮೆಸೇಜ್ ಮಾಡಿದ್ದಾನೆ.
ಕುತ್ತಿಗೆಗೆ justice is due ಎಂಬ ಬೋರ್ಡ್ ಹಾಕಿಕೊಂಡಿರುವ ಈತ ಮುಕ್ತಿಗಾಗಿ 2 ದಿನ ಟೈಮ್ ಟೇಬಲ್ ಹಾಕಿ ಸಾಯುವ ಪ್ಲಾನ್ ಮಾಡಿದ್ದಾನೆ. ಪ್ರಾಣ ಬಿಡಲು ಕಳೆದ ಎರಡು ದಿನಗಳಿಂದ ತಯಾರಿ ನಡೆಸಿದ್ದಾನೆ. ಸ್ನಾನದಿಂದ ಸಾವಿನವರೆಗೂ ಏನು ಮಾಡಬೇಕೆನ್ನುವ ಬಗ್ಗೆ ಪ್ರಾಕ್ಟೀಸ್ ಮಾಡಿದ್ದು, ಡೇ-1, ಡೇ-2 ಏನೇನು ಮಾಡ್ಬೇಕೆಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ.
ಸ್ನಾನ ಮಾಡಬೇಕು, ಕಿಟಕಿ ತೆಗೆಯಬೇಕು ಮತ್ತು ಗೇಟ್ ಲಾಕ್ ಮಾಡಬೇಕು. ಶಿವನಾಮವನ್ನ 100 ಬಾರಿ ಪಠಿಸಬೇಕು. ಫ್ರಿಡ್ಜ್ ಮೇಲೆ ಕಾರು ಬೈಕ್ ಕೀ ಇಡಬೇಕು. ರೂಮ್ ಕೀ ಫ್ರಿಡ್ಜ್ ಮೇಲಿಡಬೇಕು. ಡೆತ್ ನೋಟ್ ಅನ್ನ ಟೇಬಲ್ ಮೇಲಿಡಬೇಕು. ಡೆತ್ ನೋಟ್ ಅನ್ನು ಹೈಕೋರ್ಟ್, ಸುಪ್ರೀಂಕೋರ್ಟ್, ಆಫೀಸ್, ಕುಟುಂಬಸ್ಥರಿಗೆ ಮೇಲ್ ಕಳಿಸಬೇಕು. ನಾನು ಅನ್ನೋದನ್ನ ನಾಶ ಮಾಡಬೇಕು ಎಂದು ನೋಟ್ ಅಲ್ಲಿ ಬರೆಯಲಾಗಿದೆ.
ಹಣಕಾಸಿನ ವಿಚಾರಗಳನ್ನು ಕ್ಲಿಯರ್ ಮಾಡಬೇಕು. ಎಲ್ಲಾ ಕಮ್ಯುನಿಕೇಷನ್ ಪೂರ್ಣಗೊಳಿಸಬೇಕು. ಆಫೀಸ್ ನ ಎಲ್ಲಾ ಕೆಲಸ ಮುಗಿಸಬೇಕು. ಕಾನೂನಾತ್ಮಕ ತಯಾರಿ ಮುಗಿಸಬೇಕು. ಮುಖ್ಯ ದಾಖಲೆಗಳನ್ನ ಪ್ಯಾಕ್ ಮಾಡಬೇಕು. ಆನಂತರ ಕೊನೇ ದಿನದ ಸಾವಿನ ಆರಂಭಕ್ಕೆ ತಯಾರಾಗಬೇಕು ಅನ್ನೋದು ಇವನ ಟೈಮ್ ಟೇಬಲ್ ನಲ್ಲಿ ಬರೆದಿದ್ದು, ಅಚ್ಚರಿಗೆ ಕಾರಣವಾಗಿದೆ.
Click