ಕರಾವಳಿಸುಳ್ಯ

ಕಲ್ಲುಗುಂಡಿಯಲ್ಲಿ ಕಳ್ಳರ ಕೈ ಚಳಕ..! ನಗದು ದೋಚಿ ಪರಾರಿ

170

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಪೊಲೀಸರು ಹದ್ದಿನ ಕಣ್ಣು ಇರಿಸಿರುವುದರ ಹೊರತಾಗಿಯೂ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇರುವುದು ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಹೋಟೆಲ್‌ ವೊಂದರಿಂದ ಕಳ್ಳ ರು ನಗದು ದೋಚಿ ಪರಾರಿಯಾಗಿದ್ದಾರೆ. ನಿನ್ನೆ ( ಮೇ11) ರಂದು ತಡರಾತ್ರಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕಲ್ಲುಗುಂಡಿ ಮಧ್ಯೆ ಪೇಟೆಯಲ್ಲಿರುವ ಹೋಟೆಲ್ ಕರಾವಳಿಗೆ ನುಗ್ಗಿರುವ ಕಳ್ಳರು 3 ಸಾವಿರ ರೂ.‌ನಗದು ಕದ್ದಿದ್ದಾರೆ. 30 ಸಾವಿರ ರೂ. ಇದ್ದ ಹಣವನ್ನು ಮಾಲೀಕರು ಮನೆಗೆ ತೆಗೆದುಕೊಂಡು ಹೋಗಿದ್ದರು. ಇಲ್ಲದಿದ್ದರೆ ದೊಡ್ಡ ಮೊತ್ತ ಕಳ್ಳ ರ ಪಾಲಾಗುತ್ತಿತ್ತು. ಕಲ್ಲು ಗುಂಡಿ ಹೊರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

See also  ಸುಳ್ಯದ ನೆಲ್ಲೂರು ಕೆಮ್ರಾಜೆಯಲ್ಲಿ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ..! ಕಾರಣ ನಿಗೂಢ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget