Latestಕರಾವಳಿಸುಳ್ಯ

ಕಲ್ಲುಗುಂಡಿ: ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಶ್ರದ್ಧಾ ಭಕ್ತಿಯಿಂದ ದೇವಿ ದರ್ಶನ ಪಡೆದು ಆಶೀರ್ವಾದ ಪಡೆದ ಸಾವಿರಾರು ಭಕ್ತರು!ಮಾಜಿ ಸಚಿವ ರಮಾನಾಥ ರೈ,ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗಿ; ಹಿನ್ನಲೆ ಧ್ವನಿ ಕಲಾವಿದೆ,ನಿರೂಪಕಿ ದಯಾಮಣಿ ಹೇಮಂತ್‌ಗೆ ಗೌರವ

957

ವರದಿ:ದಯಾಮಣಿ ಹೇಮಂತ್

ನ್ಯೂಸ್ ನಾಟೌಟ್: ಸುತ್ತಲೂ ಹಸಿರು ತೋರಣ ಪೋಣಿಸಿದಂತಿರುವ ಬೆಟ್ಟ ಗುಡ್ಡಗಳಿರುವ ಕಲ್ಲುಗುಂಡಿಯ ಸುಂದರ ಪರಿಸರದ ಮಧ್ಯೆ ನೆಲ್ಲಿಕುಮೇರಿಯಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ ತಾಯಿ ಶ್ರೀ ಮುತ್ತು ಮಾರಿಯಮ್ಮ… ಸಕಲ ಇಷ್ಟಾರ್ಥಗಳನ್ನು ಕರುಣಿಸುವ ಮಾತೆ.ನಂಬಿದ ಭಕ್ತರ ಎಂದೂ ಕೈ ಬಿಡದ ದೇವಿ.ಈ ಕಾರಣಿಕ ಕ್ಷೇತ್ರವನ್ನು ಹೂಗಳಿಂದ,ತಳಿರು ತೋರಣಗಳಿಂದ,ವಿದ್ಯುದೀಪಾಲಂಕಾರದಿಂದ ಸಿಂಗರಿಸಲಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ದೇವಿ ದರ್ಶನ ಪಡೆದು ಧನ್ಯರಾದರು!.

ಕಲ್ಲುಗುಂಡಿ ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ, ಮುತ್ತು ಮಾರಿಯಮ್ಮ ,ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ , ನವಗ್ರಹ , ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವೈಧಿಕ ಕಾರ್ಯಕ್ರಮಗಳು ಫೆ 18 ಮತ್ತು 19 ರಂದು ವೈಧಿಕ ವಿಧಾನಗಳೊಂದಿಗೆ ನಡೆಯಿತು.ಈ ವೈಭವದ ಉತ್ಸವಕ್ಕೆ ಊರ-ಪರವೂರ ಭಕ್ತರು ಬಂದು ದೇವಿ ಕೃಪೆಗೆ ಪಾತ್ರರಾದರು.

ಫೆ .18 ರಂದು ಸಂಜೆ 6 ಗಂಟೆಗೆ ಕುಂಟಾರು ತಂತ್ರಿಗಳನ್ನು ಪೂರ್ಣ ಕುಂಭದ ಸ್ವಾಗತ ಮಾಡಲಾಯಿತು. ಬಳಿಕ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನ ,ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ , ಆಚಾರ್ಯವರಣ , ಪುಣ್ಯಾಹ ವಾಚನ, ಸುದರ್ಶನ ಹೋಮ, ಪ್ರೇತ ಆವಾಹನೆ, ಭಾಧಾ ಮೂರ್ತಿಗಳ ಆವಾಹನೆ, ಉಚ್ಛಾಟನೆ, ಉಚ್ಛಾಟನೆ ಬಲಿ, ಸ್ಥಳ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ , ವಾಸ್ತು ಬಲಿ , ವಾಸ್ತು ಪುಣ್ಯಾಹಂತ ವೈದಿಕ ಪೂಜಾ ಕಾರ್ಯಕ್ರಮಗಳು ನಡೆಯಿತು.

ಬಳಿಕ ಫೆ.19 ರಂದು ಬೆಳಗ್ಗೆ ಗಣಪತಿ ಹವನ, ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ , ಮಹಾಪೂಜೆ, ನಿತ್ಯ ನೈಮಿತ್ಯಗಳ ನಿರ್ಣಯ, ಬಳಿಕ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.ಈ ವೇಳೆ ಮುತ್ತುಮಾರಿಯಮ್ಮ ದೇವಸ್ಥಾನದ ಮೊಕ್ತೇಸರಾದ ಎಸ್ ಪಳನಿವೇಲು, ಅಧ್ಯಕ್ಷ ಜ್ಞಾನ ಶೀಲನ್ ವಿ (ರಾಜು), ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಪದ್ಮಯ್ಯ ಬಿ. ಆರ್, ಆಡಳಿತ ಸಮಿತಿ ಕೋಶಾಧಿಕಾರಿ ನಾಗಮುತ್ತು, ಕಾರ್ಯದರ್ಶಿ ಚರಣ್ ರಾಜ್, ಪ್ರಧಾನ ಅರ್ಚಕ ಭಾಸ್ಕರ ಭಟ್, ಗ್ರಾಂ.ಪಂ ಅಧ್ಯಕ್ಷೆ ಸುಮತಿ ಶಕ್ತಿ ವೇಲು , ಮುತ್ತು ಮಾರಿಯಮ್ಮ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಪಿ.ವಿ , ಆಡಳಿತ ಸಮಿತಿ, ಬ್ರಹ್ಮ ಕಲಶೋತ್ಸವ ಸಮಿತಿ, ಅಲಂಕಾರ ಸಮಿತಿ, ಸ್ವಯಂ ಸಮಿತಿ, ಆರ್ಥಿಕ ಸಮಿತಿ, ಆಹಾರ ಸಮಿತಿಯ ಪದಾಧಿಕಾರಿಗಳು , ಸರ್ವ ಸದಸ್ಯರು, ಊರ ಪರವೂರ ಆಡಳಿತ ಮಂಡಳಿ , ಸರ್ವ ಸದಸ್ಯರು, ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮ:

ಬಳಿಕ ಅಪರಾಹ್ನ 2ರಿಂದ ಶ್ರೀ ಮುತ್ತು ಮಾರಿಯಮ್ಮ ಭಜನಾ ಮಂಡಳಿ ನೆಲ್ಲಿಕುಮೇರಿ ಇವರಿಂದ ಭಜನಾ ಸೇವೆ ನೆರವೇರಿತು. 3.30ರಿಂದ ಸಭಾ ಕಾರ್ಯಕ್ರಮ ಆರಂಭವಾಯಿತು.ಬ್ರಹ್ಮಕಲಶೋತ್ಸವ ಸಮಿತಿ ಇದರ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಇವರು ಅಧ್ಯಕ್ಷ ಸ್ಥಾನ ಅಲಂಕರಿಸಿ, ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು.

See also  ಬೆಂಗಳೂರಲ್ಲಿ ಕುಡಿಯುವ ನೀರನ್ನು ಅನ್ಯ ಕೆಲಸಗಳಿಗೆ ಬಳಸಿದ್ದಕ್ಕೆ 20.85 ಲಕ್ಷ ರೂ. ದಂಡ..! 417 ಜನರಿಗೆ ನೋಟಿಸ್..!

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ,ಮಾಜಿ ಸಚಿವ ರಮಾನಾಥ ರೈ ,ಕೆ.ಪಿ. ಜಾನಿ (ಸದಸ್ಯರು ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕರ್ನಾಟಕ ಸರ್ಕಾರ)ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ವಸಂತ ಪೆಲ್ತಡ್ಕ , ಆಡಳಿತ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಇದರ ಮೊಕ್ತೇಸರರಾದ ಎಸ್.ಪಳನಿವೇಲು ,ಮಹಮ್ಮದ್ ಕುಂಞ ಗೂನಡ್ಕ (ಮುತ್ತು ಮಾರಿಯಮ್ಮ ದೇವಸ್ಥಾನ ಸ್ಥಳದ ನೋಂದಣಿಗೆ ಶ್ರಮಿಸಿದವರು,ಮಾಜಿ ಅಧ್ಯಕ್ಷ ಗ್ರಾ.ಪಂ ಸಂಪಾಜೆ) ಜಗದೀಶ್ ರೈ ಅಧ್ಯಕ್ಷರು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಲುಗುಂಡಿ ,ಶಿವಕುಮಾರ್ ಮಂಗಳೂರು (ರಿಕೋ ಸೊಸೈಟಿ ಅಧ್ಯಕ್ಷರು ಸುಳ್ಯ) ಉಪಸ್ಥಿತರಿದ್ದರು.ಆಡಳಿತ ಸಮಿತಿ ಅಧ್ಯಕ್ಷ ಜ್ಞಾನಶೀಲನ್ ವಿ.ರಾಜು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಬಂದಿದ್ದ ಎಲ್ಲಾ ಗಣ್ಯರಿಗೆ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಆರಂಭ ಕಾಲದಿಂದಲೇ ಸ್ಥಳಕ್ಕಾಗಿ ಶ್ರಮಿಸಿದ ಶ್ರೀ ಬೆಂಜಮಿನ್ ಡಿಸೋಜಾ ಅವರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು. ನ್ಯೂಸ್‌ ನಾಟೌಟ್ ಚಾನೆಲ್‌ ಸುಳ್ಯ ಇದರ ಹಿನ್ನಲೆ ಧ್ವನಿ ಕಲಾವಿದೆ, ನಿರೂಪಕಿ, ವಿಶೇಷ ಪ್ರತಿನಿಧಿ ದಯಾಮಣಿ ಹೇಮಂತ್ ಅವರು ಕಾರ್ಯಕ್ರಮ ನಿರೂಪಿಸಿದರು.ಬಳಿಕ ಅವರನ್ನು ವೇದಿಕೆಗೆ ಆಹ್ವಾನಿಸಿ ಗೌರವಿಸಲಾಯಿತು.

 

View this post on Instagram

 

A post shared by News not out (@newsnotout)

ಈ ವೇಳೆ ಬಿಜೆಪಿ ಮುಖಂಡ ಸಂತೋಷ್ ಕುತ್ತಮೊಟ್ಟೆ,ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ಸೇರಿದಂತೆ ಮತ್ತುಳಿದ ಗಣ್ಯರು ಸಭೆಯಲ್ಲಿ ಹಾಜರಿದ್ದರು.

ಸಾಂಸ್ಕೃತಿಕ ವೈವಿಧ್ಯ:

ಸಂಜೆ 6 ಗಂಟೆಯಿಂದ ಭಕ್ತಿ ಸಂಗೀತ ಕಾರ್ಯಕ್ರಮ, ವಿಠ್ಠಲ್ ನಾಯಕ್ ಮತ್ತು ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ಹಾಗೂ ಭರತ ನೃತ್ಯ ವೈಭವ ನಡೆಯಿತು.

 

  Ad Widget   Ad Widget   Ad Widget   Ad Widget   Ad Widget   Ad Widget   Ad Widget