ಕರಾವಳಿ

ಕಲ್ಲುಗುಂಡಿಯಲ್ಲಿ ಕೇರಳ ಪೊಲೀಸರಿಂದ ತಲಾಶ್ , ಯಾರಿಗಾಗಿ ಹುಡುಕಾಟ?

291

ನ್ಯೂಸ್ ನಾಟೌಟ್: ಕೇರಳ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿರುವ ಘಟನೆ ವರದಿಯಾಗಿದೆ.

ಕಲ್ಲುಗುಂಡಿ, ಚಟ್ಟೆಕಲ್ಲು, ಊರುಬೈಲ್‌, ಸಂಪಾಜೆಯ ಚೌಕಿ ಬಳಿ ಪೊಲೀಸರು ಹಲವು ವ್ಯಕ್ತಿಗಳಿಂದ ಒಂದಿಷ್ಟು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಯಾವ ಕಾರಣಕ್ಕಾಗಿ ಯಾರನ್ನು ವಿಚಾರಿಸಿದ್ದಾರೆ ಅನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ಸೈಬರ್‌ ಕ್ರೈಂ ವಿಚಾರಕ್ಕೆ ಸಂಬಂಧಪಟ್ಟಂತೆ ಮೊಬೈಲ್ ಲೊಕೇಷನ್ ಬಳಸಿಕೊಂಡು ಪೊಲೀಸರು ಹುಡುಕಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಆದರೆ ಯಾವ ವ್ಯಕ್ತಿಗಾಗಿ ಹುಡುಕಾಟ ಅನ್ನುವುದು ಇನ್ನೂ ಮಾಹಿತಿ ಲಭ್ಯವಾಗಿಲ್ಲ.

See also  ಸುಬ್ರಹ್ಮಣ್ಯ:ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ,ಸ್ಥಳಕ್ಕಾಗಮಿಸಿದ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ
  Ad Widget   Ad Widget   Ad Widget   Ad Widget   Ad Widget   Ad Widget   Ad Widget