ನ್ಯೂಸ್ ನಾಟೌಟ್: ಕಲ್ಲಪಳ್ಳಿಯ ಬಡ್ಡಡ್ಕ ಎಂಬಲ್ಲಿ ಕೇರಳ ರಸ್ತೆ ಸಾರಿಗೆ ನಿಗಮದ ಸರ್ಕಾರಿ ಬಸ್ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಜೀಪ್ ಮುಂಭಾಗ ಜಖಂಗೊಂಡಿದೆ. ಜೀಪ್ ನಲ್ಲಿದ್ದ ಪ್ರಯಾಣಿಕರು ಅಪಘಾತದಿಂದ ತೀವ್ರ ಗಾಬರಿಗೊಳಗಾಗಿದ್ದರು. ಆರಂಭದಲ್ಲಿ ಕೆಲವರಿಗೆ ಗಾಯಗಳಾಗಿದೆ ಎನ್ನುವಂತಹ ಮಾಹಿತಿಗಳು ಹೊರಬಿದ್ದಿದ್ದವು, ಆದರೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಬಸ್ ನವನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ .