ಕರಾವಳಿಕೊಡಗುಸುಳ್ಯ

ಕಡಬ:ಕರೆಂಟ್ ಶಾಕ್ ಗೆ ಕಂಬದಿಂದ ಎಸೆಯಲ್ಪಟ್ಟ ಮೆಸ್ಕಾಂ ಲೈನ್ ಮ್ಯಾನ್,ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

221

ನ್ಯೂಸ್ ನಾಟೌಟ್ : ಮೆಸ್ಕಾಂ ಲೈನ್ ಮ್ಯಾನ್ ಒಬ್ಬರಿಗೆ ವಿದ್ಯುತ್ ಶಾಕ್ ಗೊಳಗಾಗಿ , ಕಂಬದಿಂದ ಎಸೆಯಲ್ಪಟ್ಟು ಗಾಯಗೊಂಡಿರುವ ಘಟನೆ ಕಡಬದಿಂದ ವರದಿಯಾಗಿದೆ.ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೇ 15 ರಂದು ವರದಿಯಾಗಿದೆ.

ಮೆಸ್ಕಾಂ ಲೈನ್ ಮ್ಯಾನ್ ನಾರಾಯಣ ಎಂಬವರು ಕರೆಂಟ್ ಶಾಕ್ ಗೊಳಗಾದ ವ್ಯಕ್ತಿ.ಇವರು ಚಾರ್ವಾಕದ ಎಣ್ಮೂರಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಕಾರ್ಯ ನಿರ್ವಹಿಸುವಾಗ ಈ ಘಟನೆ ನಡೆದಿದೆ.ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು,ಚಿಕಿತ್ಸೆ ನಡೆಯುತ್ತಿದೆ. ಕೈ ಮೂಳೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

See also  ಮಡಿಕೇರಿ:ಅನಾಥ ಶವದ ಮುಂದೆ ಇತ್ತು ಲಕ್ಷಗಟ್ಟಲೆ ಹಣ,ಬೆರಗಾದ ಸ್ಥಳೀಯರು...
  Ad Widget   Ad Widget   Ad Widget   Ad Widget   Ad Widget   Ad Widget   Ad Widget