ಕರಾವಳಿ

ಕಡಬ: ಟ್ಯೂಷನ್ ‌ಗೆ ತೆರಳಿದ ಹತ್ತನೇ ತರಗತಿ ಬಾಲಕನ ಶವ ಕುಮಾರಧಾರ ನದಿಯಲ್ಲಿ ಪತ್ತೆ

246

ನ್ಯೂಸ್ ನಾಟೌಟ್: ಕಡಬದಲ್ಲಿ ಹತ್ತನೇ ತರಗತಿ ಬಾಲಕ ಟ್ಯೂಷನ್ ಗೆಂದು ಮನೆಯಿಂದ ತೆರಳಿದ್ದು, ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ನಡೆದಿತ್ತು. ಇದೀಗ ಬಾಲಕನ ಶವ ಕುಮಾರಧಾರ ನದಿಯ ನಾಕೂರು ಗಯದಲ್ಲಿ ಪತ್ತೆಯಾಗಿದ್ದು ಅಗ್ನಿ ಶಾಮಕ ದಳದವರು ಶವ ಮೇಲಕ್ಕೆತ್ತಿದ್ದಾರೆ.

ಕಡಬದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಅದ್ವೈತ್ ಎಂಬಾತ ಮಾ.29ರಂದು ಟ್ಯೂಷನ್ ಗೆಂದು ತೆರಳಿದ್ದು ಬಳಿಕ ಸಂಜೆಯಾದರೂ ಮನೆಗೆಬಾರದೆ ನಾಪತ್ತೆಯಾಗಿದ್ದ. ಮನೆಯವರು ಹಾಗೂ ಊರವರು ಸೇರಿಕೊಂಡು ಹುಡುಕಾಡಿದಾಗ ಬಾಲಕನ ಬ್ಯಾಗ್ ಹಾಗೂ ಐಡಿ ಕಾರ್ಡ್ ಕುಮಾರಧಾರ ನದಿಯ ನಾಕೂರುಗಯ ಎಂಬಲ್ಲಿ ಪತ್ತೆಯಾಗಿತ್ತು.ಇದು ಅನುಮಾನಕ್ಕೂ ಕಾರಣವಾಗಿತ್ತು. ಮಾ.31ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನಲೆ, ಪರೀಕ್ಷೆ ಬಗ್ಗೆ ಹೆದರಿಕೊಂಡು ನದಿಗೆ ಹಾರಿರುವನೇ? ಎಂಬ ಸಂಶಯ ವ್ಯಕ್ತಪಡಿಸಲಾಗಿದೆ. ನದಿಯಲ್ಲಿ ಬಾಲಕನಿಗಾಗಿ ಹುಡುಕಾಟ ಪ್ರಕ್ರಿಯೆ ನಡೆಸಿದ ಅಗ್ನಿಶಾಮಕ ದಳದವರು ಶವವನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.ತನಿಖೆ ಬಳಿಕವಷ್ಟೇ ಘಟನೆಗೆ ನಿಖರ ಕಾರಣ ಏನೆಂಬುದು ತಿಳಿದುಬರಬೇಕಾಗಿದೆ.

See also  ಸುಳ್ಯದ ಅಜ್ಜಾವರದಲ್ಲಿ ಸೋಗೆ ರಹಸ್ಯ, ಪ್ರಕೃತಿ ವಿಸ್ಮಯ ಕಂಡು ಬೆರಗಾದ ಜನ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget