ಕರಾವಳಿ

ಮಹಾವಿಷ್ಣು ಮೂರ್ತಿ ಒತ್ತೆಕೋಲಕ್ಕೆ ತರಕಾರಿ ಕೊಟ್ಟ ಮುಸ್ಲಿಂ ವ್ಯಾಪಾರಿ

ಕಲ್ಮಡ್ಕ: ಕೋಮು ಸಂಘರ್ಷ ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ-ಮುಸಲ್ಮಾನರ ನಡುವೆ ಸೌಹಾರ್ದದ ಸಂದೇಶವನ್ನು ಬಿತ್ತಿ ಇಲ್ಲೊಬ್ಬ ಮುಸ್ಲಿಂ ವ್ಯಾಪಾರಿ ಸುದ್ದಿಯಾಗಿದ್ದಾರೆ.

ಕರಾವಳಿಯ ಹಿಂದೂ ಧರ್ಮೀಯರ ಆರಾಧ್ಯ ದೈವಗಳಲ್ಲಿ ಒಂದಾಗಿರುವ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲಕ್ಕೆ ಮುಸ್ಲಿಂ ವ್ಯಾಪಾರಿ ತರಕಾರಿ ನೀಡಿ ಸೌಹಾರ್ದತೆ ಮೆರೆದಿದ್ದಾರೆ. ಹೌದು, ಈ ಅಪರೂಪದ ಘಟನೆ ಕಲ್ಮಡ್ಕದ ಕಾಚಿಲದಲ್ಲಿ ನಡೆದಿದೆ.

ಈ ಬಾರಿಯ ಒತ್ತೆಕೋಲಕ್ಕೆ ಅನ್ನಸಂತರ್ಪಣೆಗೆ ಅಗತ್ಯವಿದ್ದ ತರಕಾರಿಗಳನ್ನು ನಿಂತಿಕಲ್ಲಿನ ಅಡಿಕೆ ವ್ಯಾಪಾರಿ ಇಸ್ಮಾಯಿಲ್ ಪಡ್ಪಿನಂಗಡಿ ನೀಡಿದ್ದಾರೆ. ದೈವಸ್ಥಾನದ ಆಡಳಿತ ಮಂಡಳಿಯವರು ಇವರನ್ನು ಮೇಲೇರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.

Related posts

ಉಡುಪಿ ಪ್ರಕರಣ: ಎಸ್ಐಟಿ ತನಿಖೆ ಇಲ್ಲ ಎಂದ ಸಿಎಂ ಹೇಳಿಕೆಗೆ ಶಾಸಕ ಭರತ್‌ ಶೆಟ್ಟಿ ಕಿಡಿ, ಸಿಎಂ ಹೇಳಿಕೆ ಬೆನ್ನಲ್ಲೇ ರಾಜ್ಯಪಾಲರ ಭೇಟಿಗೆ ಮುಂದಾದ ಕರಾವಳಿ ಬಿಜೆಪಿ ಶಾಸಕರು..!ವಿಡಿಯೋ ವೀಕ್ಷಿಸಿ

ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ, ಕೃಷಿ ತೋಟಗಳಿಗೆ ಹಾನಿ

ಐವರ್ನಾಡಿನ ಹುಡುಗಿ ಭಾರತೀಯ ಸೈನ್ಯಕ್ಕೆ ಆಯ್ಕೆ