ಕರಾವಳಿ

ಸೌಜನ್ಯಳಿಗೆ ನ್ಯಾಯ ಸಿಗಬೇಕೆಂದು ಸುಳ್ಯ, ಮಂಗಳೂರಿನಲ್ಲಿ ಬಜರಂಗದಳ, ವಿಹೆಚ್‌ಪಿ ಯಿಂದ ದೇವರಿಗೆ ಸಾಮೂಹಿಕ ಪ್ರಾರ್ಥನೆ

ನ್ಯೂಸ್ ನಾಟೌಟ್ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದ ದುಷ್ಕರ್ಮಿಗಳಿಗೆ ದೇವರು ಸರಿಯಾದ ಶಿಕ್ಷೆಯನ್ನು ನೀಡಬೇಕೆಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರತ್ಯೇಕವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಮಂಗಳೂರಿನಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಸೌಜನ್ಯನ ಕೊಲೆ ಪ್ರಕರಣದ ಆದಷ್ಟು ಬೇಗ ಇತ್ಯರ್ಥ ವಾಗಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು

VHP ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ನವೀನ್ ಎಲಿಮಲೆ, ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ, ಬಿಜೆಪಿ ಮಂಡಳಾಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ರಾಜೇಶ್ ಶೆಟ್ಟಿ ಮೇನಾಲ, ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಸಹ ಸಂಯೋಜಕ ಸನತ್ ಚೊಕ್ಕಾಡಿ, ವಿಧಿ ಪ್ರಮುಖ್ ಸಂದೀಪ್ ವಳಲಂಬೆ, ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ, ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ, ಪ್ರಶಾಂತ್ ಅಂಬೆಕಲ್, ರೂಪೇಶ್ ಪೂಜಾರಿಮನೆ, ಸಂಘಟನೆಯ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಸೌಜನ್ಯ ಳನ್ನು ಅತ್ಯಾಚಾರ ಮಾಡಿ ಕ್ರೂರ ವಾಗಿ ಕೊಲೆ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆಯಾಗಲೆಂದು ವಿಶ್ವಹಿಂದೂ ಪರಿಷದ್ಬಜರಂಗದಳ ಕಲ್ಲಡ್ಕ ಪ್ರಖಂಡ ವತಿಯಿಂದ ತುಳುನಾಡಿನ ಕಾರಣಿಕ ಕ್ಷೇತ್ರ ಪಣೋಲಿಬೈಲ್ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ವಿಎಚ್ ಪಿ ಮತ್ತು ಬಜರಂಗದಳದ ಪ್ರಖಂಡ ದ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

Related posts

ಯಾವುದೇ ಅಪೇಕ್ಷೆಯಿಲ್ಲದೇ ರಸ್ತೆ ಗುಂಡಿಗಳನ್ನು ಮುಚ್ಚಿ ನಿಸ್ವಾರ್ಥ ಸೇವೆ ಮಾಡುತ್ತಿರುವ ವೃದ್ಧ..! ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್,ಅಷ್ಟಕ್ಕೂ ಈ ವ್ಯಕ್ತಿ ಯಾರು?

ಸುಳ್ಯ:’ಅಂಜಲಿ ಮೊಂಟೆಸ್ಸರಿ ಸ್ಕೂಲ್’ ಪ್ರಸ್ತುತ ಪಡಿಸುತ್ತಿದೆ “ಚಿಣ್ಣರ ಕಲರವ”,’ಬೇಸಿಗೆ ಶಿಬಿರ’ದಲ್ಲಿ ಚಿಣ್ಣರ ‘ಕನಸುಗಳಿಗೆ ರೆಕ್ಕೆ’..! ಎಲ್ಲಿ?ಹೇಗೆ?ಯಾವಾಗ? ಅನ್ನೋದಕ್ಕೆ ಈ ರಿಪೋರ್ಟ್ ಓದಿ..

ಸುಳ್ಯ: ಕುದ್ಪಾಜೆಯ 20 ಮನೆಗಳನ್ನು ಶನಿವಾರದಿಂದ ಕಗ್ಗತ್ತಲಿನಲ್ಲಿರಿಸಿದ ಮೆಸ್ಕಾಂ..!, ಸುಳ್ಯ, ಮಂಗಳೂರಿಗೆ ದೂರು ಕೊಟ್ಟರೂ ಪ್ರಯೋಜನವಿಲ್ಲ..! ಎಂಥಾ ಅವಸ್ಥೆ ಮಾರಾಯೆರೇ..!