ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಜಡ್ಜ್ ಗಳು ಕೋರ್ಟ್ ಹಾಲ್ ನಲ್ಲಿ ಗಾಂಭೀರ್ಯದಲ್ಲಿ ಕೂತು, ಆರ್ಡರ್ ಮಾಡೋದನ್ನ ನಾವು ನೀವೆಲ್ಲಾ ನೋಡಿದ್ದೇವೆ. ಆದರೆ ಕೋರ್ಟ್ ಹಾಲ್ ನಿಂದ ಹೊರಗೆ ಜಡ್ಜ್ ತೀರ್ಪು ಕೊಟ್ಟ ಅಪರೂಪದ ಘಟನೆ ತೆಲಂಗಾಣದ ನಿಜಮಾಬಾದ್ ನಲ್ಲಿ ನಡೆದಿದೆ.
ಸಾಯಿ ಶಿವಾ ಎಂಬ ಜಡ್ಜ್ ಮೆರೆದ ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕೋರ್ಟ್ ಹಾಲ್ ನಿಂದ ಹೊರ ಬಂದ ಜಡ್ಜ್ ಆಟೋದಲ್ಲೇ ಆರೋಪಿಗಳ ವಿಚಾರಣೆ ನಡೆಸಿ ನ್ಯಾಯ ಒದಗಿಸಿದ್ದಾರೆ.
ಸಯ್ಯಾಮ್ಮ, ಗಂಗಾರಾಮ್ ಎಂಬುವರ ವಿರುದ್ಧ ಸೊಸೆ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಿಸಿದ್ದರು. ಈ ಕೇಸ್ ನ ವಿಚಾರಣೆಗೆ ದಂಪತಿ ಪ್ರತಿ ಬಾರಿಯೂ ಕೋರ್ಟ್ಗೆ ಹಾಜರಾಗುತ್ತಿದ್ದರು. ಆದರೆ ಈಗ ಗಂಗಾರಾಮ್ ಕಾಲಿಗೆ ಗಂಭೀರ ಗಾಯವಾಗಿದ್ದು, ಎದ್ದು ನಡೆಯಲಾಗದ ಸ್ಥಿತಿ ಬಂದಿದೆ. ಹೀಗಾಗಿ ಗಂಗಾರಾಮ್ ಆಟೋದಲ್ಲೇ ಕೋರ್ಟ್ ಬಳಿ ಬಂದಿದ್ದರು.
ವಕೀಲರು, ಆರೋಪಿ ಕೋರ್ಟ್ ಹಾಲ್ ಗೆ ಬರುವ ದೈಹಿಕ ಸ್ಥಿತಿಯಲ್ಲಿ ಇಲ್ಲ ಎಂದು ಜಡ್ಜ್ ಗೆ ತಿಳಿಸಿದ್ದಾರೆ. ಆಗ ತಾವೇ ಕೋರ್ಟ್ ಹಾಲ್ ನ ಪೀಠದಿಂದ ಎದ್ದು ಬಂದ ಜಡ್ಜ್ ಸಾಯಿ ಶಿವಾ ಆಟೋದಲ್ಲಿ ಇದ್ದ ಆರೋಪಿಗಳ ಹಾಜರಾತಿಯನ್ನು ಖಚಿತಪಡಿಸಿಕೊಂಡಿದ್ದಾರೆ.
ಇದಾದ ಬಳಿಕ ವರದಕ್ಷಿಣೆ ಕಿರುಕುಳ ಕೇಸ್ ನ ಬಗ್ಗೆ ಎರಡು ಕಡೆಯ ವಾದ ಆಲಿಸಿದ ಜಡ್ಜ್ ಸಾಯಿ ಶಿವಾ ಕೇಸ್ ಅನ್ನು ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ. ಜಡ್ಜ್ ಸಾಯಿ ಶಿವಾ ಅವರ ಈ ಮಾದರಿ ನಡೆಗೆ ಸಾರ್ವಜನಿಕರು, ವಕೀಲರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಹಿರಿಯ ಜೀವಗಳ ಕೋರಿಕೆಗೆ ಸ್ಪಂದಿಸಿದ್ದು ಮಾತ್ರವಲ್ಲದೆ ಸೊಸೆ ಆದಾರ ರಹಿತವಾಗಿ ಸಲ್ಲಿಸಿದ್ದ ದೂರಿನ ಬಗ್ಗೆ ವಿಚಾರಿಸಿ ಪ್ರಕರಣವನ್ನು ವಜಾಗೊಳಿಸಿ ನ್ಯಾಯ ಒದಗಿಸಿದ್ದಾರೆ.
ಪಾಕ್ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಭಾರತದಲ್ಲಿ ಸ್ಥಗಿತ..! ಪಾಕ್ ನಟಿಯಿಂದ ಮೋದಿಗೆ ಮನವಿ..!