ಕರಾವಳಿ

ಎಟಿಎಂಗೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನ ಪ್ರಕರಣ: ಅಂತರ್ ಜಿಲ್ಲಾ ಕಳ್ಳರು ಸೆರೆ ,15.50 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ, ವಿಡಿಯೋ ವೀಕ್ಷಿಸಿ..

209

ನ್ಯೂಸ್ ನಾಟೌಟ್ :ಎಟಿಎಂಗೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನಿಸಿದ್ದ ನಾಲ್ವರನ್ನು ಬಂಧಿಸಲಾಗಿದೆ.ಮಂಗಳೂರು ಹೊರವಲಯದ ಸುರತ್ಕಲ್ ಇಡ್ಯಾ ಬಳಿ ಈ ಘಟನೆ ನಡೆದಿತ್ತು.

ಇದಕ್ಕೆ ಸಂಬಂಧಿಸಿದಂತೆ ಜೋಕಟ್ಟೆ ಕಡೆಗೆ ಹೋಗುವ ರಸ್ತೆಯಲ್ಲಿ ಜೆ.ಸಿ.ಬಿ ಪತ್ತೆಯಾಗಿತ್ತು.ಮಾಹಿತಿ ಕಲೆ ಹಾಕಿದ ಪೊಲೀಸರು ಕಳ್ಳತನಕ್ಕೆ ಯತ್ನಿಸಿದವರು ಬಂಧಿಸಿದ್ದಾರೆ.ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಶಿವಮೊಗ್ಗದ ಶಿಕಾರಿಪುರದ ದೇವರಾಜ್(24), ಭರತ್‌ ಹೆಚ್‌ (20), ನಾಗರಾಜ ನಾಯ್ಕ (21), ಧನರಾಜ್ ನಾಯ್ಕ( 22) ಬಂಧಿತರು.ಇವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳೆಂದು ತಿಳಿದು ಬಂದಿದೆ.

15 ಲಕ್ಷ ಸಹಿತ ನಾಲ್ವರು ಅಂತ‌ರ್ ಜಿಲ್ಲಾ ಕಳ್ಳರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಆ.4ರಂದು ಸುರತ್ಕಲ್ ಇಡ್ಯಾದ ಸೌತ್ ಇಂಡಿಯನ್ ಬ್ಯಾಂಕ್‌ನ ಎಟಿಎಂ ದರೋಡೆಗೆ ಯತ್ನ ನಡೆದಿತ್ತು. ಜೆಸಿಬಿ ಬಳಸಿಕೊಂಡು ಎಟಿಎಂನ ಗ್ಲಾಸ್ ಒಡೆದು ಎಟಿಎಂ ಮೆಷಿನ್ ನ್ನು ಕಳವು ಯತ್ನ ಮಾಡಲಾಗಿತ್ತು.

See also  ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ದಿನಾಂಕ ವಿಸ್ತರಿಸಿದ್ದೇಕೆ ಸರ್ಕಾರ? ಯಾವತ್ತು ಕೊನೇಯ ದಿನಾಂಕ? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget